ಜನಸೇನಾ ಶಾಸಕನ ಕಾಮಕಾಂಡ: ಅತ್ಯಾಚಾರ, ಬಲವಂತದ ಗರ್ಭಪಾತ; ಮಹಿಳೆ ಆರೋಪ

ಕಳೆದ ವರ್ಷದಲ್ಲಿ ಐದು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ ಮತ್ತು ಶಾಸಕರು ಪದೇ ಪದೇ ಹಿಂಸೆ ನೀಡಿ ಬೆದರಿಕೆ ಹಾಕಿದ್ದಾರೆ ನನ್ನ ಪತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
Arava sridhar
ಆರವ್ ಶ್ರೀಧರ್
Updated on

ಅಮರಾವತಿ: ಜನಸೇನಾ ಶಾಸಕ ಆರವ ಶ್ರೀಧರ್ ಮದುವೆಯ ನೆಪದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

2024 ರಲ್ಲಿ ರೈಲ್ವೆ ಕೊಡೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಸ್ವಲ್ಪ ಸಮಯದ ನಂತರ ಶೋಷಣೆ ಪ್ರಾರಂಭವಾಯಿತು ಎಂದು ವೀಡಿಯೊ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾರೆ. ತನ್ನನ್ನು ಕಾರಿನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಶ್ರೀಧರ್ ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಅವರು ಹೇಳಿದ್ದಾರೆ. ಮಹಿಳೆ ಸರ್ಕಾರಿ ಉದ್ಯೋಗಿಯಾಗಿದ್ದಾರೆ.

ಕಳೆದ ವರ್ಷದಲ್ಲಿ ಐದು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ ಮತ್ತು ಶಾಸಕರು ಪದೇಪದೇ ಹಿಂಸೆ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನನ್ನ ಪತಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ವೀಡಿಯೊದಲ್ಲಿ, ಶಾಸಕರು ತಮ್ಮನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ಅವರು ಹೇಳಿದ್ದಾರೆ.

ನೀವು ಗರ್ಭಪಾತ ಮಾಡಿಸಿಕೊಂಡರೆ, ನೀವು ಬದುಕುಳಿಯುತ್ತೀರಿ, ನಿಮ್ಮ ಕುಟುಂಬ ಚೆನ್ನಾಗಿರುತ್ತದೆ ಹಾಗೂ ನಿಮ್ಮ ಕೆಲಸ ಚೆನ್ನಾಗಿರುತ್ತದೆ, ಇಲ್ಲದಿದ್ದರೆ, ನಿಮಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಶಾಸಕರು ಬೆದರಿಕೆ ಹಾಕಿದ್ದಾಗಿ ಮಹಿಳೆ ಹೇಳಿದ್ದಾರೆ.

Arava sridhar
'ನನ್ನನ್ನು ರಕ್ಷಿಸಲು ಈಗ ಗಂಡನಿಲ್ಲ': ಟ್ರೋಲ್‌ಗಳಿಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ತಿರುಗೇಟು

ಯಾವುದೇ ಸಂದರ್ಭದಲ್ಲೂ ನಾನು ಗರ್ಭಪಾತ ಮಾಡಿಕೊಳ್ಳುವುದಿಲ್ಲ ಎಂದು ವಾದಿಸಿದೆ. ಎರಡು ಅಥವಾ ಮೂರು ದಿನಗಳವರೆಗೆ ನನ್ನನ್ನು ಬೆದರಿಸಿ ನಂತರ ನನಗೆ ಭರವಸೆ ನೀಡಿದರು. ನಿನ್ನ ಗಂಡನಿಗೆ ವಿಚ್ಛೇದನ ನೀಡಿದರೆ, ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಶಾಸಕರು ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾರೆ.

ನನ್ನ ಬಗ್ಗೆ ಸುಳ್ಳು ಪ್ರಚಾರ ಮಾಡಲು ಡೀಪ್ ಫೇಕ್ ವೀಡಿಯೊಗಳನ್ನು ಪ್ರಸಾರ ಮಾಡಲಾಗಿದೆ. ಇದರ ಹಿಂದಿರುವವರನ್ನು ನಾನು ನೇರವಾಗಿ ಪ್ರಶ್ನಿಸುತ್ತೇನೆ. ನಾನು 2021 ರಿಂದ ಮೂರು ವರ್ಷಗಳ ಕಾಲ ಸರಪಂಚನಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ, ನನ್ನ ಹಳ್ಳಿಯಲ್ಲಿ, ನೆರೆಯ ಪಂಚಾಯತ್‌ಗಳಲ್ಲಿ ಅಥವಾ ಇಡೀ ಮಂಡಲದಲ್ಲಿ ಯಾರಾದರೂ ಶ್ರೀಧರ್ ಏನಾದರೂ ತಪ್ಪು ಮಾಡಿದ್ದಾರೆ ಅಥವಾ ಕೆಟ್ಟ ವ್ಯಕ್ತಿ ಎಂದು ಸಾಬೀತುಪಡಿಸಲಿ? ಅವರು ವೀಡಿಯೊ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ನಾನು ನಮ್ಮ ಜನ ಸೇನಾ ಪಕ್ಷದ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇನೆ. ಸಾರ್ವಜನಿಕ ಸೇವೆಗೆ ಅವರ ಸಮರ್ಪಣೆಯಿಂದ ಪ್ರೇರಿತನಾಗಿ, ನನ್ನ ಕ್ಷೇತ್ರವಾದ ರೈಲ್ವೆ ಕೊಡೂರಿನ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ಆದರೂ, ನನ್ನ ವಿರುದ್ಧ ಇಂತಹ ಸುಳ್ಳು ಪ್ರಚಾರಗಳನ್ನು ಪ್ರಾರಂಭಿಸಲಾಗಿದೆ," ಎಂದು ಅವರು ಹೇಳಿದರು.

"ನಾನು ಕಳೆದ ಒಂದೂವರೆ ವರ್ಷದಿಂದ ಇದನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಾರೆ. ಆದಾಗ್ಯೂ, ಕಳೆದ ಆರು ತಿಂಗಳಿನಿಂದ ನಾನು ಕಿರುಕುಳವನ್ನು ಎದುರಿಸುತ್ತಿದ್ದೇನೆ ಮತ್ತು ನನ್ನ ತಾಯಿ ಇದರ ಬಗ್ಗೆ ಪೊಲೀಸ್ ದೂರು ಕೂಡ ದಾಖಲಿಸಿದ್ದಾರೆ. ನನ್ನ ಮೇಲೆ ಅಪಪ್ರಚಾರ ಮಾಡುವ ಈ ಉದ್ದೇಶಪೂರ್ವಕ ಪ್ರಯತ್ನದ ಹಿಂದೆ ಇರುವವರನ್ನು ನಾನು ಕಂಡು ಹಿಡಿಯುತ್ತೇನೆ, ನ್ಯಾಯಾಲಯದ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಳ್ಳುತ್ತೇನೆ" ಎಂದು ಶ್ರೀಧರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com