ತಮಿಳು ನಾಡು ಚುನಾವಣೆ: ದೆಹಲಿಯಲ್ಲಿ ಕನಿಮೋಳಿ-ರಾಹುಲ್ ಗಾಂಧಿ ಭೇಟಿ, ಒಪ್ಪಂದಕ್ಕೆ ಬಾರದ ಮಾತುಕತೆ, ಕಾಂಗ್ರೆಸ್ ಗೆ ಸಿಗುತ್ತಾ ಹೆಚ್ಚಿನ ಸ್ಥಾನ?

ರಾಹುಲ್ ಗಾಂಧಿ ನಿವಾಸದಿಂದ ಹೊರಬಂದ ಕನಿಮೋಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡದೆ ಹೊರನಡೆದರು
DMK MP Kanimozhi with Congress leader and LoP Rahul Gandhi.
ಕಾಂಗ್ರೆಸ್ ನಾಯಕ ಮತ್ತು ಎಲ್ಒಪಿ ರಾಹುಲ್ ಗಾಂಧಿ ಅವರೊಂದಿಗೆ ಡಿಎಂಕೆ ಸಂಸದೆ ಕನಿಮೋಳಿ
Updated on

ನವದೆಹಲಿ, ಚೆನ್ನೈ: ತಮಿಳು ನಾಡು ವಿಧಾನಸಭೆ ಚುನಾವಣೆಗೆ ಮುನ್ನ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಳ್ಳದ ಕಾರಣ, ಡಿಎಂಕೆ ಸಂಸದೆ ಮತ್ತು ಸಂಸದೀಯ ಪಕ್ಷದ ನಾಯಕಿ ಕನಿಮೋಳಿ ನಿನ್ನೆ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು.

ಡಿಎಂಕೆ ನೇತೃತ್ವದ ಭವಿಷ್ಯದ ಸರ್ಕಾರದಲ್ಲಿ ಹೆಚ್ಚಿನ ಸ್ಥಾನಗಳಿಗಾಗಿ ಕಾಂಗ್ರೆಸ್ ಬೇಡಿಕೆಯ ಕುರಿತು ಮಿತ್ರಪಕ್ಷಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಉಭಯ ನಾಯಕರು ಸುಮಾರು 40 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ರಾಹುಲ್ ಗಾಂಧಿ ನಿವಾಸದಿಂದ ಹೊರಬಂದ ಕನಿಮೋಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡದೆ ಹೊರನಡೆದರು, ಈ ಭೇಟಿ ಬಗ್ಗೆ ಕಾಂಗ್ರೆಸ್ ಕೂಡ ಅಧಿಕೃತ ಹೇಳಿಕೆ ನೀಡಲಿಲ್ಲ. ಆದಾಗ್ಯೂ, ಪಕ್ಷದ ನಾಯಕತ್ವದೊಂದಿಗೆ, ವಿಶೇಷವಾಗಿ ರಾಹುಲ್ ಗಾಂಧಿಯೊಂದಿಗೆ ಕನಿಮೋಳಿ ಅವರ ದೀರ್ಘಕಾಲದ ಕೆಲಸದ ಸಂಬಂಧವನ್ನು ಉಲ್ಲೇಖಿಸಿ, ಕಾಂಗ್ರೆಸ್ ಮೂಲಗಳು ಈ ಭೇಟಿಯನ್ನು ಸೌಹಾರ್ದಯುತ ಮತ್ತು ಉತ್ಪಾದಕವಾಗಿತ್ತು ಎಂದು ಬಣ್ಣಿಸಿದೆ.

DMK MP Kanimozhi with Congress leader and LoP Rahul Gandhi.
ತಮಿಳುನಾಡು ಚುನಾವಣೆ: ಡಿಎಂಕೆ ಜತೆ ಸೀಟು ಹಂಚಿಕೆ ಮಾತುಕತೆಗೆ ಐವರು ಸದಸ್ಯರ ಸಮಿತಿ ರಚಿಸಿದ ಕಾಂಗ್ರೆಸ್

ಡಿಎಂಕೆ ಯಾವುದೇ ಅಧಿಕಾರ ಹಂಚಿಕೆ ವ್ಯವಸ್ಥೆಯನ್ನು ಪರಿಗಣಿಸಲು ಒಲವು ತೋರುತ್ತಿಲ್ಲ ಎಂದು ಕನಿಮೋಳಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದಲ್ಲಿ ಪಾಲನ್ನು ತಳ್ಳಿಹಾಕಿದರೂ, ಕಾಂಗ್ರೆಸ್‌ಗೆ ವಿಧಾನಸಭಾ ಸ್ಥಾನಗಳ ಸಂಖ್ಯೆಯಲ್ಲಿ ನಾಮಮಾತ್ರ ಹೆಚ್ಚಳವನ್ನು ಪರಿಗಣಿಸಬಹುದು ಎಂದು ಡಿಎಂಕೆ ಸೂಚಿಸಿದೆ. ಆದರೂ ಗಣನೀಯ ಹೆಚ್ಚಳ ಅಸಂಭವವಾಗಿದೆ.

DMK MP Kanimozhi with Congress leader and LoP Rahul Gandhi.
ತಮಿಳುನಾಡು ಚುನಾವಣೆ 2026: 'ಶುದ್ಧ ಶಕ್ತಿ' ಟಿವಿಕೆ ಮತ್ತು 'ದುಷ್ಟ ಶಕ್ತಿ' ಡಿಎಂಕೆ ನಡುವಿನ ಸ್ಪರ್ಧೆ- ನಟ ವಿಜಯ್

ತಮಿಳು ನಾಡು ಚುನಾವಣೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 35 ಸ್ಥಾನಗಳಲ್ಲಿ ಸ್ಪರ್ಧಿಸಬೇಕೆಂದು ಒತ್ತಾಯಿಸುತ್ತಿದೆ. 2021 ರಲ್ಲಿ ಅದು ಸ್ಪರ್ಧಿಸಿದ್ದ 25 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದಿತ್ತು. ಡಿಸೆಂಬರ್‌ನಲ್ಲಿ ಎರಡೂ ಪಕ್ಷಗಳ ಸೀಟು ಹಂಚಿಕೆ ಸಮಿತಿಗಳ ನಡುವಿನ ಮಾತುಕತೆಯ ಸಮಯದಲ್ಲಿ, ಅಧಿಕಾರ ಹಂಚಿಕೆ ಚರ್ಚೆಗೆ ಬಾರದಿದ್ದರೂ, ಹೆಚ್ಚುವರಿ ಸ್ಥಾನಗಳ ವಿಷಯವನ್ನು ಮತ್ತಷ್ಟು ಚರ್ಚಿಸಬಹುದು ಎಂದು ಒಪ್ಪಿಕೊಳ್ಳಲಾಗಿತ್ತು.

ಇತ್ತೀಚಿನ ವಾರಗಳಲ್ಲಿ ಕೆಲವು ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಅಧಿಕಾರದಲ್ಲಿ ಹಂಚಿಕೆಗೆ ಒತ್ತಾಯಿಸುತ್ತಿರುವುದರಿಂದ ಉಂಟಾಗಿದ್ದ ಉದ್ವಿಗ್ನತೆಯನ್ನು ಶಮನಗೊಳಿಸುವ ಪ್ರಯತ್ನವಾಗಿ ಈ ಉಭಯ ನಾಯಕರ ಭೇಟಿಯನ್ನು ವಿಶ್ಲೇಷಿಸಲಾಗುತ್ತಿದೆ. ಎರಡೂ ಪಕ್ಷಗಳ ನಡುವಿನ ಸಂಘರ್ಷ ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಈ ಸಂವಾದವನ್ನು ಡಿಎಂಕೆ ಮೂಲಗಳು ವಿವರಿಸಿವೆ.

ಮುಂದಿನ ತಿಂಗಳು ಆರಂಭಕ್ಕೆ ನಿರ್ಧಾರ?

ಮುಂದಿನ ತಿಂಗಳು ಫೆಬ್ರವರಿ ಆರಂಭದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಡಿಎಂಕೆ ಸಮಿತಿಯನ್ನು ರಚಿಸಿದ ನಂತರ, ಫೆಬ್ರವರಿ 3 ಮತ್ತು 4 ರಂದು ತಾತ್ಕಾಲಿಕವಾಗಿ ಮಾತುಕತೆಗಳನ್ನು ನಿಗದಿಪಡಿಸಲಾಗಿದ್ದು, ಕಾಂಗ್ರೆಸ್‌ನ ಸೀಟು ಹಂಚಿಕೆ ಸಮಿತಿಯು ಚೆನ್ನೈನಲ್ಲಿ ಡಿಎಂಕೆ ಮಾತುಕತೆ ತಂಡವನ್ನು ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.

ಮಾತುಕತೆಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಫೆಬ್ರವರಿ ಮೊದಲ ವಾರದಲ್ಲಿ ತಮಿಳುನಾಡಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಸೀಟು ಹಂಚಿಕೆ ಒಪ್ಪಂದ ಮುಗಿದ ನಂತರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ರಾಜ್ಯದಲ್ಲಿ ಪ್ರಚಾರ ಆರಂಭಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com