ಫೆಬ್ರವರಿ 1 ಕೇಂದ್ರ ಬಜೆಟ್: ಭಾನುವಾರದಂದೇ ಆಯವ್ಯಯ ಮಂಡಿಸುತ್ತಿರುವುದೇಕೆ; ಬ್ರಿಟೀಷ್ ಯುಗದ ಸಂಪ್ರದಾಯ ಮುರಿದದ್ದು ಯಾರು?

ನಿರ್ಮಲಾ ಅವರು ಹಣಕಾಸು ಸಚಿವೆ ಆಗಿ ಜನವರಿ 31ರಂದು (ಶನಿವಾರ) ಆರು ವರ್ಷ, ಎಂಟು ತಿಂಗಳು ಕಳೆದಿವೆ. ಅವರು ಭಾನುವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಆಗ ಅವರು ಸತತವಾಗಿ ಒಂಬತ್ತನೆಯ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿಸಲಿದ್ದಾರೆ.
Finance Minister Nirmala Sitaraman
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ online desk
Updated on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಒಂಬತ್ತನೆಯ ಬಾರಿಗೆ ಬಜೆಟ್‌ ಮಂಡನೆ ಮಾಡಲಿದ್ದಾರೆ. ನಿರಂತರವಾಗಿ, ಅತ್ಯಂತ ಹೆಚ್ಚಿನ ಅವಧಿಗೆ ಕೇಂದ್ರದ ಹಣಕಾಸು ಸಚಿವರ ಹುದ್ದೆಯನ್ನು ನಿರ್ವಹಿಸಿದ ಹೆಗ್ಗಳಿಕೆ ನಿರ್ಮಲಾ ಅವರಿಗೆ ಸಲ್ಲುತ್ತದೆ.

ನಿರ್ಮಲಾ ಅವರು 2019ರ ಮೇ 31ರಂದು ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನಂತರ ಕೋವಿಡ್‌ ಸಾಂಕ್ರಾಮಿಕ, ಜಾಗತಿಕ ಮಟ್ಟದಲ್ಲಿನ ಹಲವು ಬಿಕ್ಕಟ್ಟುಗಳ ಸಂದರರ್ಭದಲ್ಲಿ ಅವರು ಈ ಹೊಣೆಯನ್ನು ನಿರ್ವಹಿಸಿದ್ದಾರೆ. ಭಾರತವು ಅವರ ಅವಧಿಯಲ್ಲಿ ವಿಶ್ವದಲ್ಲಿ ಅತ್ಯಂತ ವೇಗದ ಬೆಳವಣಿಗೆ ಕಾಣುತ್ತಿರುವ ಪ್ರಮುಖ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಿರ್ಮಲಾ ಅವರು ಹಣಕಾಸು ಸಚಿವೆ ಆಗಿ ಜನವರಿ 31ರಂದು (ಶನಿವಾರ) ಆರು ವರ್ಷ, ಎಂಟು ತಿಂಗಳು ಕಳೆದಿವೆ. ಅವರು ಭಾನುವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಆಗ ಅವರು ಸತತವಾಗಿ ಒಂಬತ್ತನೆಯ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿಸಲಿದ್ದಾರೆ.

ಹಣಕಾಸು ಸಚಿವರು ಪ್ರತಿ ವರ್ಷ ಫೆಬ್ರವರಿ 1 ರಂದು ಬಜೆಟ್ ಮಂಡಿಸುತ್ತಾರೆ, ಆದರೆ ಅದು ಯಾವಾಗಲೂ ಹಾಗಿರಲಿಲ್ಲ. ಇದಕ್ಕೂ ಮೊದಲು, ಫೆಬ್ರವರಿ ಅಂತ್ಯದಲ್ಲಿ ಬಜೆಟ್ ಮಂಡಿಸಲಾಗುತ್ತಿತ್ತು. ಹಾಗಾದರೆ, ದಿನಾಂಕವನ್ನು ಫೆಬ್ರವರಿ 1 ಕ್ಕೆ ಏಕೆ ಬದಲಾಯಿಸಲಾಯಿತು?

Finance Minister Nirmala Sitaraman
Watch | ಬಜೆಟ್ 2026: ರಿಯಲ್ ಎಸ್ಟೇಟ್ ವಲಯ ಏನನ್ನು ನಿರೀಕ್ಷಿಸಬಹುದು?

2016 ರವರೆಗೆ, ಭಾರತವು ಫೆಬ್ರವರಿ ಕೊನೆಯ ಕೆಲಸದ ದಿನದಂದು ಬಜೆಟ್ ಮಂಡಿಸುವ ಬ್ರಿಟಿಷ್ ಯುಗದ ಪದ್ಧತಿಯನ್ನು ಅನುಸರಿಸಿತ್ತು. ಸಮಸ್ಯೆಯೆಂದರೆ ಹಣಕಾಸು ವರ್ಷವು ಏಪ್ರಿಲ್ 1 ರಂದು ಪ್ರಾರಂಭವಾಗುತ್ತದೆ, ಅಂದರೆ ಸಚಿವಾಲಯಗಳು, ವ್ಯವಹಾರಗಳು ಮತ್ತು ತೆರಿಗೆದಾರರು ಹೊಸ ನೀತಿಗಳು ಮತ್ತು ತೆರಿಗೆ ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಬಹಳ ಕಡಿಮೆ ಸಮಯವಿರುತ್ತಿತ್ತು.

ಬಜೆಟ್ ಅನುಮೋದಿಸಿ ಜಾರಿಗೆ ತರುವ ಹೊತ್ತಿಗೆ, ಹೊಸ ಹಣಕಾಸು ವರ್ಷ ಪ್ರಾರಂಭವಾಗಿತ್ತು. ಪರಿಣಾಮವಾಗಿ, ಅನೇಕ ಸರ್ಕಾರಿ ಯೋಜನೆಗಳು ಮತ್ತು ನೀತಿಗಳು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗದೆ ವಿಳಂಬವಾಗುತ್ತಿದ್ದವು.

2017 ರಲ್ಲಿ, ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1 ರಂದು ಮೊದಲ ಬಾರಿಗೆ ಬಜೆಟ್ ಮಂಡಿಸಿದರು. ಅಂದಿನಿಂದ, ಸರ್ಕಾರವು ಆರಂಭಿಕ ದಿನಾಂಕವನ್ನು ಕಾಯ್ದುಕೊಂಡಿದೆ. ಹೊಸ ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ಎಲ್ಲರಿಗೂ ಯೋಜಿಸಲು ಹೆಚ್ಚಿನ ಸಮಯವನ್ನು ನೀಡುವುದು ಇದರ ಉದ್ದೇಶವಾಗಿದೆ.

ಅದೇ ರೀತಿ, ವಸಾಹತುಶಾಹಿ ಯುಗದಿಂದಲೂ ಅನುಸರಿಸುತ್ತಿದ್ದ ಬಜೆಟ್‌ನ ಸಮಯವನ್ನು ಸಹ ಬದಲಾಯಿಸಲಾಯಿತು. 1999 ರವರೆಗೆ, ಬಜೆಟ್ ಅನ್ನು ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತ. ಹೆಚ್ಚಿನ ಮಾಧ್ಯಮ ಪ್ರಸಾರ ಮತ್ತು ಉತ್ತಮ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಗೆ ಅವಕಾಶ ನೀಡಲು ಆಗಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಸಮಯವನ್ನು ಬೆಳಿಗ್ಗೆ 11 ಗಂಟೆಗೆ ಬದಲಾಯಿಸಿದರು.

Finance Minister Nirmala Sitaraman
'ಭಾರತ' ಎಲ್ಲಿ 'ವಿಕಸಿತ' ಆಗುತ್ತಿದೆ ಎಂಬುದು ತಿಳಿದಿಲ್ಲ; ಕೇಂದ್ರ ಬಜೆಟ್ ಜನರನ್ನು ಮೂರ್ಖರನ್ನಾಗಿಸುತ್ತದೆ: ಎಂ.ಸಿ ಸುಧಾಕರ್

ಇನ್ನೂ ಈ ಬಾರಿ ಫೆಬ್ರವರಿ 1 ಭಾನುವಾರ ಬಂದಿದೆ. ಕೇಂದ್ರ ಸರ್ಕಾರ ಭಾನುವಾರ ಫೆಬ್ರವರಿ ಒಂದು ಬಂದ್ರೂ ಅದೇ ದಿನ ಬಜೆಟ್ ಮಂಡಿಸಲು ಒಲವು ತೋರಿದೆ. ನಿಗದಿತ ದಿನಾಂಕವನ್ನು ಬದಲಿಸಲು ಸರ್ಕಾರ ಬಯಸ್ತಿಲ್ಲ. ಬಜೆಟ್ ಪ್ರಕ್ರಿಯೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸರ್ಕಾರ ಆಲೋಚನೆಯಿಂದ ಫೆಬ್ರವರಿ 1 ರಂದೆ ಬಜೆಟ್ ಮಂಡನೆಯಾಗುತ್ತಿದೆ. ಬಜೆಟ್ ಅಧಿವೇಶನದ ಮೊದಲ ಹಂತ ಸುಮಾರು ಮೂರು ವಾರಗಳವರೆಗೆ ನಡೆಯುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ, ರಾಷ್ಟ್ರಪತಿಗಳು ಭಾಷಣ ಮಾಡಲಿದ್ದಾರೆ. ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯಲಿದೆ. ನಂತ್ರ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com