ರಾಮ ಮಂದಿರದಿಂದ ಕದ್ದ ಹಣದಲ್ಲಿ ಗರ್ಲ್‌ಫ್ರೆಂಡ್‌ಗೆ ಐಫೋನ್‌ ಗಿಫ್ಟ್: ಪ್ರಮುಖ ಆರೋಪಿ ಶುಕ್ಲಾ ತಪ್ಪೊಪ್ಪಿಗೆ!

ಶುಕ್ಲಾ ತನ್ನನ್ನು ಹೊರತುಪಡಿಸಿ ತನ್ನ ಕುಟುಂಬ ಮತ್ತು ಸ್ನೇಹಿತರಿಗಾಗಿ ಸುಮಾರು ₹19 ಲಕ್ಷ ಖರ್ಚು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
Avinash Shukla
ಅವಿನಾಶ್ ಶುಕ್ಲಾ
Updated on

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಪೆಟ್ಟಿಗೆಗಳಿಂದ ಕದ್ದ ಲಕ್ಷಾಂತರ ರೂಪಾಯಿ ಹಣವನ್ನು ಆರೋಪಿಯೊಬ್ಬರು ತಮ್ಮ ಕುಟುಂಬ, ಸ್ನೇಹಿತರು ಮತ್ತು ಗರ್ಲ್‌ಫ್ರೆಂಡ್‌ಗೆ ದುಬಾರಿ ಉಡುಗೊರೆಗಳನ್ನು ಖರೀದಿಸಲು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೇಣಿಗೆ ಕಳ್ಳತನದ ಆರೋಪ ಎದುರಿಸುತ್ತಿರುವ ಎಂಟು ಎಣಿಕೆ ಸಿಬ್ಬಂದಿಗಳಲ್ಲಿ ಒಬ್ಬರಾದ ಅವಿನಾಶ್ ಶುಕ್ಲಾ ಅವರು ತಪ್ಪೊಪ್ಪಿಗೆಯನ್ನು ಉಲ್ಲೇಖಿಸಿ, ಕದ್ದ ಹಣದಲ್ಲಿ ದುಬಾರಿ ಐಫೋನ್ ಮತ್ತು ಮದುವೆಗೆ ಹಣಕಾಸು ಒದಗಿಸಲು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶುಕ್ಲಾ ತನ್ನ ವಿಚಾರಣೆಯ ಸಮಯದಲ್ಲಿ ಈ ದೊಡ್ಡ ವಿಷಯಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.

ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದರಲ್ಲಿ ಕದ್ದ ಮೊತ್ತವು ಕೋಟಿಗಳಲ್ಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಶುಕ್ಲಾ ತನ್ನನ್ನು ಹೊರತುಪಡಿಸಿ ತನ್ನ ಕುಟುಂಬ ಮತ್ತು ಸ್ನೇಹಿತರಿಗಾಗಿ ಸುಮಾರು ₹19 ಲಕ್ಷ ಖರ್ಚು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕದ್ದ ಹಣವನ್ನು ಖರ್ಚು ಮಾಡಿದ್ದರಲ್ಲಿ ಆತನ ಸಹೋದರನ ಅದ್ದೂರಿ ವಿವಾಹವೂ ಸೇರಿತ್ತು. ಶುಕ್ಲಾ ಮದುವೆಗೆ ಸುಮಾರು ₹6 ಲಕ್ಷ ಖರ್ಚು ಮಾಡಿ, ಮತ್ತೊಬ್ಬ ಸಹೋದರನಿಗೆ ₹5-6 ಲಕ್ಷ ನೀಡಿದ್ದಾರೆ. ಇದಲ್ಲದೆ, ಆರೋಪಿ ತನ್ನ ಗೆಳತಿಗೆ ಐಫೋನ್ ಉಡುಗೊರೆಯಾಗಿ ನೀಡಿ, ಆಕೆಗೆ ₹2.5 ಲಕ್ಷ ವರ್ಗಾಯಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಎನ್‌ಡಿಟಿವಿಗೆ ಲಭ್ಯವಾದ ಪೊಲೀಸ್ ದಾಖಲೆಗಳು ಈ ಹಿಂದೆ ಶುಕ್ಲಾ ಸುಮಾರು ₹20 ಲಕ್ಷಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ತೋರಿಸಿದ್ದವು. ಇದು ಯಾವುದೇ ಶಂಕಿತರು ತೆಗೆದುಕೊಂಡಿದ್ದಕ್ಕಿಂತ ಅತ್ಯಧಿಕ ಮೊತ್ತವಾಗಿದೆ.

Avinash Shukla
ರಾಮ ಮಂದಿರ ದೇಣಿಗೆ ಏನಾಯ್ತು ಎಂದು ಮಂತ್ರಾಕ್ಷತೆ ಕೊಟ್ಟವರನ್ನು ಕೇಳಬೇಕು: ರಾಹುಲ್ ಗಾಂಧಿಯಂತೆ ಯಾರಾದರೂ ಪಾದಯಾತ್ರೆ ಮಾಡಿದ್ದಾರಾ?

ಈ ಆರೋಪಗಳನ್ನು ಸಾಭೀತುಪಡಿಸಲು ಹಣದ ಸ್ಪಷ್ಟ ಜಾಡನ್ನು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಈಗ ಈ ಹಣಕಾಸಿನ ವಹಿವಾಟುಗಳು, ಬ್ಯಾಂಕ್ ಖಾತೆಗಳು ಮತ್ತು ಸಂಬಂಧಿತ ಆಸ್ತಿಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.

ಜೂನ್ 25 ರಂದು, ಟ್ರಸ್ಟ್‌ನ ಸದಸ್ಯ ಕೃಷ್ಣ ಮೋಹನ್ ಅವರ ದೂರಿನ ಮೇರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿತ್ತು. ಎಫ್‌ಐಆರ್‌ನಲ್ಲಿ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ (ಟಿನ್ನು ಎಂದೂ ಕರೆಯುತ್ತಾರೆ) ಅವರ ಹೆಸರುಗಳಿವೆ. ಇವರೆಲ್ಲರೂ ರಾಮ ಮಂದಿರದಲ್ಲಿ ದೇಣಿಗೆ ಎಣಿಕೆ ಸಿಬ್ಬಂದಿಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಹಲವಾರು ಅಪರಿಚಿತ ವ್ಯಕ್ತಿಗಳನ್ನು ಸಹ ಉಲ್ಲೇಖಿಸಲಾಗಿದೆ.

ಕಳುವಾದ ನಿಖರವಾದ ಮೊತ್ತ ಎಷ್ಟು ಎಂಬುದು ಇನ್ನೂ ತಿಳಿದಿಲ್ಲವಾದರೂ, ದೇವಾಲಯದ ಪುಸ್ತಕಗಳಿಂದ ₹7-7.5 ಕೋಟಿ ನಗದು ಕಾಣೆಯಾಗಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ, ಪೊಲೀಸರು ಆರೋಪಿಗಳಿಂದ ಸುಮಾರು ₹80 ಲಕ್ಷ ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com