Form 6 ತಿದ್ದುಪಡಿ ಮಾಡದೇ ಹೊಸ ಮತದಾರರ ಅರ್ಜಿಗೆ ಪೋಷಕರ SIR ವಿವರ ಕಡ್ಡಾಯ: ಚುನಾವಣಾ ಆಯೋಗ

ಈ ಘೋಷಣೆಯನ್ನು ಕಳೆದ ವರ್ಷದ ಜೂನ್‌ನಲ್ಲಿ ಬಿಹಾರದಲ್ಲಿ ಜಾರಿಗೊಂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸೇರಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ಈ ಘೋಷಣೆಯನ್ನು ನಿರ್ದೇಶನಗಳ ಮೂಲಕ ಸೇರಿಸಲಾಗಿದ್ದು, ನಮೂನೆ-6ರಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿಲ್ಲ.
Election Comission
ಚುನಾವಣಾ ಆಯೋಗ
Updated on

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸುವ ಹೊಸ ಅರ್ಜಿದಾರರು, ನಮೂನೆ-6 (Form 6) ಜೊತೆಗೆ ತಮ್ಮ ಪೋಷಕರ ಎಸ್‌ಐಆರ್ (Special Intensive Revision - SIR) ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಈ ಘೋಷಣೆಯನ್ನು ಕಳೆದ ವರ್ಷದ ಜೂನ್‌ನಲ್ಲಿ ಬಿಹಾರದಲ್ಲಿ ಜಾರಿಗೊಂಡ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸೇರಿಸಲಾಗಿತ್ತು. ಅಧಿಕಾರಿಗಳ ಪ್ರಕಾರ, ಈ ಘೋಷಣೆಯನ್ನು ನಿರ್ದೇಶನಗಳ ಮೂಲಕ ಸೇರಿಸಲಾಗಿದ್ದು, ನಮೂನೆ-6ರಲ್ಲಿ ಯಾವುದೇ ತಿದ್ದುಪಡಿ ಮಾಡಲಾಗಿಲ್ಲ. ಆದರೆ ಹೊಸ ಮತದಾರರು ನಮೂನೆ-6 ಜೊತೆಗೆ ಈ ಘೋಷಣೆಯನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು.

ಬಿಹಾರದ ಎಸ್‌ಐಆರ್‌ನ ದೈನಂದಿನ ಬುಲೆಟಿನ್‌ಗಳಲ್ಲಿ ಘೋಷಣೆಯೊಂದಿಗೆ ಭರ್ತಿ ಮಾಡಿದ ನಮೂನೆಗಳನ್ನು ತೋರಿಸಲಾಗಿತ್ತು ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರಿಂದ ಮತದಾರರ ಮಾಹಿತಿಯನ್ನು ಸುಲಭವಾಗಿ ಹೊಂದಾಣಿಕೆ (ಮ್ಯಾಪಿಂಗ್) ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಹೊಸ ಮತದಾರರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಯಾರಾದರೂ ಆನ್‌ಲೈನ್ ಮೂಲಕ ನಮೂನೆ-6 ಭರ್ತಿ ಮಾಡಿದರೆ, ಅಗತ್ಯ ಘೋಷಣೆಯನ್ನು ಭರ್ತಿ ಮಾಡದೆ ಮುಂದಿನ ಹಂತಕ್ಕೆ ಸಾಗಲು ಸಾಧ್ಯವಿಲ್ಲ.

ಇದೇ ವೇಳೆ, ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದು, ವಿಶ್ವಸಂಸ್ಥೆಯ ವಿಶೇಷ ವರದಿಗಾರರು ವ್ಯಕ್ತಪಡಿಸಿರುವ ಆತಂಕಗಳನ್ನು ತಳ್ಳಿಹಾಕಿದೆ. ಈ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಸಂವಿಧಾನಬದ್ಧವಾಗಿದೆ ಹಾಗೂ ಸುಪ್ರೀಂ ಕೋರ್ಟ್‌ನಿಂದಲೂ ಮಾನ್ಯತೆ ಪಡೆದಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

Election Comission
SIR: ವಿಶೇಷ ತೀವ್ರ ಪರಿಷ್ಕರಣೆ, 22 ಲಕ್ಷ ಮತದಾರರ ಹೆಸರು ಡಿಲೀಟ್! ಬಾಂಗ್ಲಾ, ಮ್ಯಾನ್ಮಾರ್ ಪ್ರಜೆಗಳು ಪತ್ತೆ!

ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಎಸ್‌ಐಆರ್‌ನ ಉದ್ದೇಶ ಎಲ್ಲಾ ಅರ್ಹ ಭಾರತೀಯ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರಿಸುವುದರ ಜೊತೆಗೆ, ನಕಲಿ, ಮೃತ, ಸ್ಥಳಾಂತರಗೊಂಡ, ಗೈರುಹಾಜರಿರುವ ಹಾಗೂ ವಿದೇಶಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವುದಾಗಿದೆ.

ಪಶ್ಚಿಮ ಬಂಗಾಳದ ನಂದಿಗ್ರಾಮ ಸೇರಿದಂತೆ ಅಲ್ಪಸಂಖ್ಯಾತ ಮತದಾರರ ಹೆಸರನ್ನು ದೊಡ್ಡ ಪ್ರಮಾಣದಲ್ಲಿ ಪಟ್ಟಿಯಿಂದ ಅಳಿಸಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಹೆಸರು ಕೈಬಿಟ್ಟಿದ್ದರೆ ಅದನ್ನು ಪ್ರಶ್ನಿಸಲು ಮತದಾರರಿಗೆ ಸಮರ್ಪಕ ಅವಕಾಶ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಪಕ್ಷಪಾತ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿಶ್ವಸಂಸ್ಥೆಯ ವಿಶೇಷ ವರದಿಗಾರರು ಎಸ್‌ಐಆರ್ ಪ್ರಕ್ರಿಯೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com