ವಿದ್ಯಾರ್ಥಿಗಳ ಮೇಲೆ ಎಕೆ-47 ಬಳಕೆ, ಲಾಠಿಚಾರ್ಜ್ ತಪ್ಪು, ಇದನ್ನು ವಿರೋಧಿಸುತ್ತೇವೆ: ತಮ್ಮದೇ ಸರ್ಕಾರದ ವಿರುದ್ಧ ಎನ್‌ಡಿಎ ಸಂಸದೆ ಕಿಡಿ

"ಎಕೆ-47 ಬಳಸಿದ್ದು ತಪ್ಪು ಮತ್ತು ನಾವು ಅದನ್ನು ವಿರೋಧಿಸುತ್ತೇವೆ; ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ಲಾಠಿಚಾರ್ಜ್ ಮಾಡಿದ್ದು ಕೂಡ ತಪ್ಪು" ಎಂದು ಅವರು ಹೇಳಿದರು.
Bihar Cop, Seen On Camera Firing At Protesting Students With AK-47
ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿonline desk
Updated on

ನವದೆಹಲಿ: ಜುಲೈ 25 ರಂದು ಸಿವಾನ್ ಜಿಲ್ಲೆಯಲ್ಲಿ ನಡೆದ 'ಬಿಹಾರ ಬಂದ್' ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಅಧಿಕಾರಿಯೊಬ್ಬರು ಎಕೆ-47 ರೈಫಲ್ ಬಳಸಿದ ವಿಡಿಯೋ ವೈರಲ್ ಆಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ.

ವಿದ್ಯಾರ್ಥಿಗಳ ಮೇಲೆ ಎಕೆ-47 ಬಳಕೆ ಮತ್ತು ಲಾಠಿಚಾರ್ಜ್ ತಪ್ಪು ಎಂದಿರುವ ಎನ್‌ಡಿಎ ಮಿತ್ರಪಕ್ಷ ಲೋಕ ಜನಶಕ್ತಿ ಪಕ್ಷದ(ರಾಮ್ ವಿಲಾಸ್) ಸಂಸದೆ ಶಾಂಭವಿ ಚೌಧರಿ, "ನಾವು ಇದನ್ನು ವಿರೋಧಿಸುತ್ತೇವೆ" ಎಂದು ಸೋಮವಾರ ಹೇಳಿದ್ದಾರೆ.

ಆದಾಗ್ಯೂ, ಕಾರ್ಯಕರ್ತೆ ಸೋನಮ್ ವಾಂಗ್‌ಚುಕ್ ಮತ್ತು ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಪ್ರತಿಭಟನೆಯ ಸಮಯದಲ್ಲಿ ಸಮಾಜ ವಿರೋಧಿ ಶಕ್ತಿಗಳು ಇದ್ದವು. ಆದರೆ "ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲಾಗಿದೆ" ಎಂದು ಅವರು ತಿಳಿಸಿದ್ದಾರೆ.

Bihar Cop, Seen On Camera Firing At Protesting Students With AK-47
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಎಕೆ-47 ಬಳಸಿ ಫೈರಿಂಗ್: ಬಿಹಾರ ಪೊಲೀಸ್ ಅಮಾನತು

"ಪ್ರಜಾಪ್ರಭುತ್ವದ ಸೌಂದರ್ಯವೆಂದರೆ ನೀವು ನಿಮ್ಮ ದೃಷ್ಟಿಕೋನವನ್ನು ಶಾಂತಿಯುತವಾಗಿ ಮುಂದಿಡಬಹುದು. ಶಾಂತಿಯುತ ಪ್ರತಿಭಟನೆ ಯಾವಾಗಲೂ ಸ್ವಾಗತಾರ್ಹ ಮತ್ತು ನಮ್ಮ ಪ್ರಜಾಪ್ರಭುತ್ವದಲ್ಲಿ, ಯುವಕರು ಭಾಗವಹಿಸಲು ಹಾಗೂ ತಮ್ಮ ಅಭಿಪ್ರಾಯಗಳನ್ನು ಹೇಳುವ ಹಕ್ಕನ್ನು ಹೊಂದಿದ್ದಾರೆ" ಎಂದು ಚೌಧರಿ ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಎಕೆ-47 ಬಳಸಿದ್ದು ತಪ್ಪು ಮತ್ತು ನಾವು ಅದನ್ನು ವಿರೋಧಿಸುತ್ತೇವೆ; ವಿವಿಧ ಸ್ಥಳಗಳಲ್ಲಿ ವಿದ್ಯಾರ್ಥಿಗಳ ವಿರುದ್ಧ ಲಾಠಿಚಾರ್ಜ್ ಮಾಡಿದ್ದು ಕೂಡ ತಪ್ಪು" ಎಂದು ಅವರು ಹೇಳಿದರು.

ಗುಂಡಿನ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ ಮತ್ತು ಪ್ರತಿಭಟನೆಯ ಸಮಯದಲ್ಲಿ ಗುಂಡು ಹಾರಿಸದಂತೆ ಪೊಲೀಸ್ ಪಡೆಗೆ ಸ್ಪಷ್ಟ ಸೂಚನೆಗಳಿರುವುದರಿಂದ, ಆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಸಿವಾನ್ ಎಸ್‌ಪಿ ಪೂರಣ್ ಕುಮಾರ್ ಝಾ ಪಿಟಿಐಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com