ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿಯ ಬಗ್ಗೆ ಅಮಿತ್ ಶಾ ತಿಳಿದಿರಲಿಲ್ಲ ಎಂದಾದರೆ ಅವರು ಅಸಮರ್ಥರು: ರಾಹುಲ್ ಗಾಂಧಿ ತೀವ್ರ ಟೀಕೆ! Video

ಗುಂಡಿನ ದಾಳಿ ನಡೆಯುತ್ತಿರುವುದು ಗೃಹ ಸಚಿವರಿಗೆ ತಿಳಿದಿರಲಿಲ್ಲ ಎಂದಾದರೆ, ಅವರು ಅಸಮರ್ಥರು ಎಂದರ್ಥ; ಇಲ್ಲವೇ, ಅವರೇ ಆದೇಶ ನೀಡಿದ್ದರೆ ಅವರು ತಪ್ಪಿತಸ್ಥರು ಎಂದು ಹೇಳಿದರು.
Amitsha, Rahul Gandhi
ಅಮಿತ್ ಶಾ, ರಾಹುಲ್ ಗಾಂಧಿ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ವಿದ್ಯಾರ್ಥಿಗಳ ಮೇಲೆ ಪೆಲ್ಲೆಟ್ ಗುಂಡಿನ ದಾಳಿ ಬಗ್ಗೆ ಗೃಹ ಸಚಿವರು ತಿಳಿದಿರಲಿಲ್ಲ ಎಂದಾದರೆ, ಅವರು ಅಸಮರ್ಥರು ಎಂದರ್ಥ; ಇಲ್ಲವೇ, ಅವರೇ ಆದೇಶ ನೀಡಿದ್ದರೆ ಅವರು ತಪ್ಪಿತಸ್ಥರು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.

ಲೋಕಸಭೆಯಲ್ಲಿನ ತಮ್ಮ ಭಾಷಣದ ಕುರಿತು ಸಂಸತ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, "ಇದರಲ್ಲಿ ಎರಡು ಸಾಧ್ಯತೆಗಳಿರಬಹುದು. ಮೊದಲನೆಯದಾಗಿ, ಗೃಹ ಸಚಿವರೇ ಗುಂಡಿನ ದಾಳಿಗೆ ಆದೇಶ ನೀಡಿರಬಹುದು. ಎರಡನೆಯದಾಗಿ, ಗುಂಡಿನ ದಾಳಿ ನಡೆಯಲಿದೆ ಎಂಬ ವಿಷಯವೇ ಅವರಿಗೆ ತಿಳಿದಿರಲಿಕ್ಕಿಲ್ಲ. ಮೊದಲನೆಯ ಸಂದರ್ಭದಲ್ಲಿ ಅವರು ತಪ್ಪಿತಸ್ಥರಾಗುತ್ತಾರೆ; ಎರಡನೆಯ ಸಂದರ್ಭದಲ್ಲಿ ಅವರು ಅಸಮರ್ಥರೆನಿಸಿಕೊಳ್ಳುತ್ತಾರೆ - ಈ ಎರಡರಲ್ಲಿ ಒಂದಾಗಿರಲೇಬೇಕು, ಮೂರನೇ ಸಾಧ್ಯತೆಯೇ ಇಲ್ಲ ಎಂದರು.

ಗುಂಡಿನ ದಾಳಿ ನಡೆಯುತ್ತಿರುವುದು ಗೃಹ ಸಚಿವರಿಗೆ ತಿಳಿದಿರಲಿಲ್ಲ ಎಂದಾದರೆ, ಅವರು ಅಸಮರ್ಥರು ಎಂದರ್ಥ; ಇಲ್ಲವೇ, ಅವರೇ ಆದೇಶ ನೀಡಿದ್ದರೆ ಅವರು ತಪ್ಪಿತಸ್ಥರು ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸದನಕ್ಕೆ ಬಂದೇ ಇಲ್ಲ. ಅವರು ಯಾಕೆ ಬರುತ್ತಿಲ್ಲ? ಭಾರತದ 'ಧೈರ್ಯಶಾಲಿ' ಎಂದು ಹೇಳಿಕೊಳ್ಳುವ ಗೃಹ ಸಚಿವರು ಸದನದಲ್ಲಿ ಏಕೆ ಇಲ್ಲ? ಅವರು ಏನನ್ನೂ ಮಾಡಿಲ್ಲ ಮತ್ತು ಯಾವುದೇ ಆದೇಶವನ್ನೂ ನೀಡಿಲ್ಲ ಎಂದಾದರೆ, ತಾವು ಆದೇಶ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಬೇಕು. ಮುಖ್ಯ ವಿಷಯವೇನೆಂದರೆ, ಸಂಸತ್ತಿನಲ್ಲಿ ಮಾತನಾಡಲು ನನಗೆ ಹಕ್ಕಿದೆ ಮತ್ತು ಆ ಹಕ್ಕನ್ನು ನನಗೆ ನೀಡಲೇಬೇಕು ಎಂದರು.

ಜುಲೈ 20 ರಂದು ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ವೇಳೆ ನಡೆದ ಪೊಲೀಸ್ ಲಾಠಿಚಾರ್ಜ್ ಬಗ್ಗೆ ರಾಹುಲ್ ಗಾಂಧಿ ಬುಧವಾರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗ ತೀವ್ರ ನಾಟಕೀಯ ಬೆಳವಣಿಗೆಗಳು ಮತ್ತು ಮಾತಿನ ಚಕಮಕಿ ನಡೆಯಿತು. ಇದಕ್ಕೆ ಆಡಳಿತಾರೂಢ ಸರ್ಕಾರವು ಕಟುವಾದ ಪ್ರತಿಕ್ರಿಯೆ ನೀಡಿತು. ರಾಹುಲ್ ಗಾಂಧಿ ಅವರು ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ನೇರ ವಾಗ್ದಾಳಿ ನಡೆಸಿ, ಸದನಕ್ಕೆ ಅವರ ಗೈರುಹಾಜರಿಯು "ಭಯ"ದ ಸಂಕೇತ ಎಂದು ಹೇಳಿದಾಗ ಈ ಸಂಘರ್ಷ ತೀವ್ರ ಸ್ವರೂಪ ಪಡೆಯಿತು.

Amitsha, Rahul Gandhi
Neet ಪ್ರಶ್ನೆ ಪತ್ರಿಕೆ ಸೋರಿಕೆ: ಅಂಧಭಕ್ತ.. ಈಡಿಯಟ್.. RSS, ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ, ಸಂಸತ್ ನಲ್ಲಿ ಹೈಡ್ರಾಮಾ

ದೇಶಾದ್ಯಂತ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸದನವನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, "ಇಲ್ಲಿಗೆ ಬಂದು ಕುಳಿತುಕೊಳ್ಳುವ ಧೈರ್ಯ ಗೃಹ ಸಚಿವರಿಗಿಲ್ಲ. ಅವರು ಭಯಭೀತರಾಗಿರುವುದರಿಂದಲೇ ಇಂದು ಇಲ್ಲಿಗೆ ಬಂದಿಲ್ಲ," ಎಂದು ಟೀಕಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com