ವಿಜಯ್ ಸರ್ಕಾರದ ಯೋಜನೆ ಹೆಸರಲ್ಲಿ scam; ತಲೆ ಬೋಳಿಸಿಕೊಂಡರೆ 15,000 ರೂ ಪ್ರೋತ್ಸಾಹ ಧನ: ತಮಿಳುನಾಡಿನಲ್ಲಿ ಮಹಿಳೆಯರಿಗೆ ವಂಚನೆ!

ಮಹಿಳೆಯರು ಕ್ಷೌರ ಮಾಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ತಮಿಳುನಾಡು ಸರ್ಕಾರ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ ಎಂದು ವಂಚಕ ನಂಬಿಸಿದ್ದ.
ವಿಜಯ್ ಸರ್ಕಾರದ ಯೋಜನೆ ಹೆಸರಲ್ಲಿ scam; ತಲೆ ಬೋಳಿಸಿಕೊಂಡರೆ 15,000 ರೂ ಪ್ರೋತ್ಸಾಹ ಧನ: ತಮಿಳುನಾಡಿನಲ್ಲಿ ಮಹಿಳೆಯರಿಗೆ ವಂಚನೆ!
Updated on

ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮಹಿಳೆಯರನ್ನು ಸಾಂಕ್ರಾಮಿಕ ರೋಗವೊಂದರ ಬಗ್ಗೆ ತಪ್ಪು ಮಾಹಿತಿ ನೀಡಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು, ಹೊಸ ಸಾಂಕ್ರಾಮಿಕ ಕಾಯಿಲೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕ್ಷೌರ ಮಾಡಿಸಿಕೊಂಡ ಮಹಿಳೆಯರಿಗೆ 15,000 ರೂ. ಪ್ರೋತ್ಸಾಹ ಧನ ನೀಡುವುದಾಗಿ ವಂಚಕನೊಬ್ಬ ಭರವಸೆ ನೀಡಿದ್ದ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆಯರು, ತಮ್ಮಲ್ಲಿ ಒಬ್ಬರಿಗೆ ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ಫೋನ್ ಕರೆ ಮಾಡಿದ್ದ, ಕುಟುಂಬ ಸದಸ್ಯರ ಬಗ್ಗೆ ವಿವರಗಳನ್ನು ನೀಡಿ ಮಹಿಳೆಯರ ವಿಶ್ವಾಸ ಗಳಿಸಲು ಪ್ರಯತ್ನಿಸಿದರು.

COVID-19 ಗೆ ಹೋಲುವ ಹೊಸ ಸಾಂಕ್ರಾಮಿಕ ರೋಗ ಮಾನವ ಕೂದಲಿನ ಮೂಲಕ ಹರಡುತ್ತಿದೆ ಎಂದು ಹೇಳಿದರು. ನಂತರ ಅವರು ಅಂತಹ ರೋಗವನ್ನು ತಡೆಗಟ್ಟಲು, ಕ್ಷೌರ ಮಾಡಿಸಿಕೊಳ್ಳಬೇಕು ಹೇಳಿದ್ದ ಅಷ್ಟೇ ಅಲ್ಲದೇ ತಾನು ಹೇಳಿದ್ದನ್ನು ಸಮರ್ಥಿಸಿಕೊಳ್ಳುವುದಕ್ಕೆ ವಿದೇಶಗಳ ಉದಾಹರಣೆ ನೀಡಿದ ವ್ಯಕ್ತಿ ಅಲ್ಲಿನ ಮಹಿಳೆಯರು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳುವುದಕ್ಕಾಗಿ ತಲೆ ಬೋಳಿಸಿಕೊಂಡಿದ್ದಾರೆ ಎಂದು ಹೇಳಿದ್ದ.

ವಿಜಯ್ ಸರ್ಕಾರದ ಯೋಜನೆ ಹೆಸರಲ್ಲಿ scam; ತಲೆ ಬೋಳಿಸಿಕೊಂಡರೆ 15,000 ರೂ ಪ್ರೋತ್ಸಾಹ ಧನ: ತಮಿಳುನಾಡಿನಲ್ಲಿ ಮಹಿಳೆಯರಿಗೆ ವಂಚನೆ!
ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ದೊಡ್ಡ ಗೆಲುವು: ಗೋಹತ್ಯೆ ನಿಷೇಧಕ್ಕೆ ತಡೆ!

ಮಹಿಳೆಯರು ಕ್ಷೌರ ಮಾಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸಲು ತಮಿಳುನಾಡು ಸರ್ಕಾರ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ ಎಂದು ವಂಚಕ ನಂಬಿಸಿದ್ದ.

ತಲೆ ಬೋಳಿಸಿಕೊಳ್ಳುವ ಮಹಿಳೆಯರಿಗೆ 15,000 ರೂ. ಮತ್ತು ಶಾಲಾ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರಿಗೆ ಕ್ಷೌರಕ್ಕಾಗಿ 45,000 ರೂ. ಜೊತೆಗೆ ಲ್ಯಾಪ್‌ಟಾಪ್ ನೀಡಲಾಗುವುದು, ಪುರುಷರಿಗೆ 6,000 ರೂ. ನೀಡಲಾಗುವುದು ಎಂದು ಆತ ಹೇಳಿದ್ದ.

ಗ್ರಾಮದಿಂದ ಸೀಮಿತ ಸಂಖ್ಯೆಯ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಕರೆ ಮಾಡಿದವರು ಹೇಳಿದರು ಮತ್ತು ನಿವಾಸಿಗಳು ತಮ್ಮ ಸಂಬಂಧಿಕರಲ್ಲಿ ಮಾಹಿತಿಯನ್ನು ಹಂಚಿಕೊಳ್ಳಲು ಒತ್ತಾಯಿಸಿದರು. ಮರುದಿನ ಮಧ್ಯಾಹ್ನ ಪ್ರೋತ್ಸಾಹ ಧನ ವಿತರಿಸಲು ಸರ್ಕಾರಿ ಅಧಿಕಾರಿಗಳು ಬರುವ ಮೊದಲು ಕ್ಷೌರ ಪೂರ್ಣಗೊಳಿಸಿಕೊಳ್ಳಲು ಆತ ಸೂಚನೆ ನೀಡಿದ್ದ. ಈಗಾಗಲೇ ತಲೆ ಬೋಳಿಸಿಕೊಂಡವರಿಗೆ ಮಾತ್ರ ಹಣ ಸಿಗುತ್ತದೆ ಎಂದು ಎಚ್ಚರಿಸಿದರು.

ಈ ಹೇಳಿಕೆಗಳನ್ನು ನಂಬಿದ ಸುಮಾರು 20 ಗ್ರಾಮಸ್ಥರು ಕ್ಷೌರ ಮಾಡಿಸಿಕೊಳ್ಳಲು ಸಿದ್ಧರಾದರು. ಭರವಸೆ ನೀಡಿದ ಸರ್ಕಾರಿ ಸಹಾಯವನ್ನು ಪಡೆಯುತ್ತೇವೆ ಮತ್ತು ಆಪಾದಿತ ಕಾಯಿಲೆಯಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತೇವೆ ಎಂದು ನಂಬಿಕೊಂಡ ಮೂವರು ಮಹಿಳೆಯರು ಕ್ಷೌರ ಮಾಡಿಸಿಕೊಂಡಿದ್ದಾರೆ.

ನಂತರ ಮಹಿಳೆಯರು ಭರವಸೆ ನೀಡಿದ ಪಾವತಿಯ ಕುರಿತು ಕರೆ ಮಾಡಿದವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ವಂಚನೆ ಬೆಳಕಿಗೆ ಬಂದಿತು. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು, ಇದರಿಂದಾಗಿ ಅವರು ಮೋಸ ಹೋಗಿದ್ದಾರೆಂದು ಅರಿತುಕೊಂಡರು. ಯೋಜನೆ ನಕಲಿ ಎಂದು ತಿಳಿದ ನಂತರ ಉಳಿದ ಗ್ರಾಮಸ್ಥರು ತಕ್ಷಣ ಕ್ಷೌರ ಮಾಡಿಸಿಕೊಳ್ಳುವ ತಮ್ಮ ಯೋಜನೆಯನ್ನು ಕೈಬಿಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com