TMCಗೆ ಮತ್ತೊಂದು ಶಾಕ್: ದೀದಿ ದಿಲ್ಲಿಯಲ್ಲಿರುವಾಗಲೇ ಪಕ್ಷ ತೊರೆದ ರಾಜ್ಯಸಭಾ ಸಂಸದ, ಆಪ್ತ ಸುಖೇಂದು ಶೇಖರ್ ರೇ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಂಡ ನಂತರ ತೃಣಮೂಲ ಪಕ್ಷ ಪಕ್ಷ ಭಾರಿ ಬಂಡಾಯವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಬಂದಿದೆ.
Mamata Banarjee-sukhendu sekhar ray (file photo)
ಮಮತಾ ಬ್ಯಾನರ್ಜಿ-ಸುಖೇಂದು ಶೇಖರ್ ರೇ..online desk
Updated on

ನವದೆಹಲಿ: ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಹಿನ್ನಡೆಯಾಗಿ, ದೀರ್ಘಕಾಲದ ಸಹಾಯಕ ಸುಖೇಂದು ಶೇಖರ್ ರೇ ತೃಣಮೂಲ ಪಕ್ಷವನ್ನು ತೊರೆದು, ಪಕ್ಷದಲ್ಲಿನ ಬಿಕ್ಕಟ್ಟಿನ ಮಧ್ಯೆ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಂಡ ನಂತರ ತೃಣಮೂಲ ಪಕ್ಷ ಪಕ್ಷ ಭಾರಿ ಬಂಡಾಯವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಬಂದಿದೆ.

ರಾಜೀನಾಮೆ ನೀಡಲು ರೇ ಇಂದು ಬೆಳಿಗ್ಗೆ ಸಂಸತ್ತಿಗೆ ಆಗಮಿಸಿದರು, ವಿಪಕ್ಷಗಳ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ದಿಲ್ಲಿಯಲ್ಲಿರುವಾಗಲೇ ರಾಜ್ಯಸಭಾ ಸಂಸದನ ರಾಜೀನಾಮೆ ಬಂದಿರುವುದು ಪಕ್ಷದಲ್ಲಿನ ತಳಮಳವನ್ನು ಹೆಚ್ಚಿಸಿದೆ.

2011 ರಲ್ಲಿ ಬಂಗಾಳದಲ್ಲಿ ಅವರ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರೇ ಅವರು ಬ್ಯಾನರ್ಜಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

Mamata Banarjee-sukhendu sekhar ray (file photo)
ಸರ್ಕಾರಿ ಯೋಜನೆಗಳ ಫಲಾನುಭವಿಗಳಿಂದ ಹಣ ವಸೂಲಿ; TMC ನಾಯಕನ ತಲೆ ಬೋಳಿಸಿ ಶೂ ಹಾಕಿದ ಗ್ರಾಮಸ್ಥರು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com