'ಸೈಲೆಂಟ್ ಮೋಡ್'ನಿಂದ ಯಾವಾಗ ಹೊರಬರುತ್ತೀರಿ? ಯಾಕೀ ದಿವ್ಯ ಮೌನ?: ಸಿಎಂ ವಿಜಯ್‌ಗೆ ಸ್ಟಾಲಿನ್ ಪ್ರಶ್ನೆ

"ಡಿಎಂಕೆಯಿಂದ ನೀವು ದೊಡ್ಡ ಪ್ರತಿಭಟನೆಯನ್ನು ನಿರೀಕ್ಷಿಸುತ್ತೀರಾ? ಮಿಸ್ಟರ್ ಮುಖ್ಯಮಂತ್ರಿಗಳೇ, ನೀವು ಏಕೆ ಮೌನವಾಗಿದ್ದೀರಿ?" ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
CM Vijay, stalin
ಸಿಎಂ ವಿಜಯ್, ಸ್ಟಾಲಿನ್
Updated on

ಚೆನ್ನೈ: ಡಿಎಂಕೆ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಗಳವಾರ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು "ಆಡಳಿತದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದು, ನೀವು " ಯಾವಾಗ "ಸೈಲೆಂಟ್ ಮೋಡ್" ನಿಂದ ಹೊರಬರುತ್ತೀರಿ ಎಂದು ಪ್ರಶ್ನಿಸಿದ್ದಾರೆ.

ತಮಿಳುನಾಡಿನಲ್ಲಿ ಅಪರಾಧಿಗಳು ನಿರ್ಭೀತಿಯಿಂದ ವರ್ತಿಸುವುದನ್ನು ತಡೆಯಲು ತೆಗೆದುಕೊಂಡ ಕ್ರಮಗಳನ್ನು ವಿವರಿಸುತ್ತೀರಾ? "ಜನರ ಸುರಕ್ಷತೆಗೆ ಸಂಬಂಧಿಸಿದಂತೆ ನೀವು ಯಾವಾಗ ಕಾಲ್ ಶೀಟ್ ನೀಡುತ್ತೀರೆ?" ಎಂದು ಸ್ಟಾಲಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದಾರೆ.

ದಕ್ಷ ಅಧಿಕಾರಿಗಳನ್ನು ನೇಮಿಸಿ ಸಿಂಗಪ್ಪೆನ್ ವಿಶೇಷ ಪಡೆ ಆರಂಭಿಸಿದ್ದೇನೆ ಎಂದು ಹೇಳಿಕೊಂಡರೂ, ಮಕ್ಕಳನ್ನು ಕಳೆದುಕೊಂಡ ಪೋಷಕರ ಕೂಗು ಮುಖ್ಯಮಂತ್ರಿಗೆ ಕೇಳುಸುತ್ತಿಲ್ಲವೇ? ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

CM Vijay, stalin
ತಮಿಳುನಾಡು ರೈತರಿಗೆ ಸಿಎಂ ವಿಜಯ್ ಭರ್ಜರಿ ಗಿಫ್ಟ್; 75,000 ರೂ. ವರೆಗಿನ ಬೆಳೆ ಸಾಲ ಸಂಪೂರ್ಣ ಮನ್ನಾ!

ಮಕ್ಕಳ ಸುರಕ್ಷತೆ ಮತ್ತು ಜೀವಗಳು ಕಳವಳಕಾರಿ ವಿಷಯವಾಗಿದ್ದಾಗಲೂ ಮುಖ್ಯಮಂತ್ರಿಗಳು ಆರು ತಿಂಗಳು ಮೌನವಾಗಿರಬೇಕೆಂದು ಬಯಸಿದ್ದಾರೆಯೇ ಎಂದು ಮಾಜಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ಡಿಎಂಕೆಯಿಂದ ನೀವು ದೊಡ್ಡ ಪ್ರತಿಭಟನೆಯನ್ನು ನಿರೀಕ್ಷಿಸುತ್ತೀರಾ? ಮಿಸ್ಟರ್ ಮುಖ್ಯಮಂತ್ರಿಗಳೇ, ನೀವು ಏಕೆ ಮೌನವಾಗಿದ್ದೀರಿ?" ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com