

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 56ನೇ ಜನ್ಮದಿನದ ಅಂಗವಾಗಿ, ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಸ್ವಕ್ಷೇತ್ರ ವಾರಾಣಸಿಯ ಗಂಗಾ ನದಿ ತೀರದಲ್ಲಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ನಡೆಸಿದರು.
ಒಂದು ಕೈಯಲ್ಲಿ ಸಂವಿಧಾನ ಮತ್ತು ಮತ್ತೊಂದು ಕೈಯಲ್ಲಿ ಕೊಡಲಿಯನ್ನು ಹಿಡಿದಿರುವ ಪರಶುರಾಮನ ರೀತಿಯಲ್ಲಿ ರಾಹುಲ್ ಗಾಂಧಿಯ ಭಾವಚಿತ್ರ ರೂಪಿಸಿು, ಮೀಸಲಾತಿ ನೀತಿಗಳ ಮೂಲಕ ರಾಜ್ಯದಲ್ಲಿನ ಮೇಲ್ಜಾತಿಯ ಕ್ಷತ್ರಿಯರ ಪ್ರಭಾವವನ್ನು ಕಡಿಮೆ ಮಾಡಲು ಸಮರ್ಪಿತರಾಗಿರುವಂತೆ ಚಿತ್ರಿಸಿರುವುದು ಕಂಡುಬಂತು. ವೇದ ಮಂತ್ರಗಳೊಂದಿಗೆ ರಾಹುಲ್ ಗಾಂಧಿಯವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ಗೌರವ ಮತ್ತು ಬೆಂಬಲ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಗಂಗಾ ನದಿಯ ಘಾಟ್ಗಳಲ್ಲಿ ಸೇರಿ, ರಾಹುಲ್ ಗಾಂಧಿಯವರಿಗೆ ಶುಭಾಶಯಗಳನ್ನು ಸಲ್ಲಿಸಿದರು. ಲೋಕಸಭೆಯ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿಯವರ ಮೇಲಿನ ಗೌರವದ ಸಂಕೇತವಾಗಿ ಈ ಆಚರಣೆ ಆಯೋಜಿಸಲಾಗಿತ್ತು.
ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ಉದ್ಯೋಗ ಮೇಳಗಳು, ಸಮಾಜಸೇವಾ ಚಟುವಟಿಕೆಗಳು ಹಾಗೂ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ವಾರಾಣಸಿಯ ಕಾರ್ಯಕ್ರಮವೂ ಅದರ ಒಂದು ಭಾಗವಾಗಿತ್ತು.
Advertisement