ನಿರ್ಲಜ್ಜವಾಗಿ ನಿಷ್ಠೆ-ಗೌರವ ಮಾರಾಟ; ದುರಾಸೆಯಿಂದ ಜನಾದೇಶಕ್ಕೆ ದ್ರೋಹ: ಆದಿತ್ಯ ಠಾಕ್ರೆ ವಾಗ್ದಾಳಿ

ಪಕ್ಷಾಂತರ ಮಾಡಿದ ದುರಾಶೆಯ ಸಂಸದರೇ, ನೀವು ಈ ಕೆಳಗಿನ ವಿಷಯಗಳನ್ನು ಮೊದಲಿಗಿಂತಲೂ ಹೆಚ್ಚು ಬಲವಾಗಿ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ನಿಷ್ಠೆ, ಗೌರವವನ್ನು ಅತ್ಯಂತ ನಿರ್ಲಜ್ಜವಾಗಿ ಮಾರಾಟಕ್ಕಿಟ್ಟಿದ್ದೀರಿ. ಸರ್ಕಾರವು ಪಕ್ಷಪಾತಿಯಾಗಿದೆ.
Aaditya Thackeray
ಆದಿತ್ಯ ಠಾಕ್ರೆ
Updated on

ಮುಂಬಯಿ: ಮಹಾರಾಷ್ಟ್ರದಲ್ಲಿ ಆಪರೇಷನ್ ಟೈಗರ್​ಗೆ ಠಾಕ್ರೆ ಬಣದ ಆರು ಸಂಸದರು ಬಲಿಯಾಗಿರುವ ನಡುವೆಯೇ ಸೋಮವಾರಪಕ್ಷದ ಬಂಡಾಯ ಸಂಸದರ ವಿರುದ್ಧ ಆದಿತ್ಯ ಠಾಕ್ರೆತೀವ್ರ ವಾಗ್ದಾಳಿ ನಡೆಸಿದ್ದು, ರಾಜಕೀಯ ಲಾಭಕ್ಕಾಗಿ ತಮ್ಮ ಸ್ಥಾನ, ನಿಷ್ಠೆ ಹಾಗೂ ಖ್ಯಾತಿಯನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಪಕ್ಷ ಬದಲಾಯಿಸಿದ ಸಂಸದರು ಮಹಾ ವಿಕಾಸ್ ಅಘಾಡಿ ಮತ್ತು ಇಂಡಿಯಾ ಬ್ಲಾಕ್ ವೇದಿಕೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಆದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷಾಂತರ ಮಾಡಿದ ದುರಾಶೆಯ ಸಂಸದರೇ, ನೀವು ಈ ಕೆಳಗಿನ ವಿಷಯಗಳನ್ನು ಮೊದಲಿಗಿಂತಲೂ ಹೆಚ್ಚು ಬಲವಾಗಿ ಸಾಬೀತುಪಡಿಸುತ್ತಿದ್ದೀರಿ. ನಿಮ್ಮ ನಿಷ್ಠೆ, ಗೌರವವನ್ನು ಅತ್ಯಂತ ನಿರ್ಲಜ್ಜವಾಗಿ ಮಾರಾಟಕ್ಕಿಟ್ಟಿದ್ದೀರಿ. ಸರ್ಕಾರವು ಪಕ್ಷಪಾತಿಯಾಗಿದೆ.

Aaditya Thackeray
ಶಿವಸೇನೆ(ಯುಬಿಟಿ) ಗೆ ಭಾರಿ ಹೊಡೆತ! ಏಕನಾಥ್ ಶಿಂಧೆ ಬಣಕ್ಕೆ ಸಂಸದ ಓಂಪ್ರಕಾಶ್ ನಿಂಬಾಳ್ಕರ್ ಸೇರ್ಪಡೆ ನಿಶ್ಚಿತ!

ಸಾರ್ವಜನಿಕರ ಹಣವನ್ನು ರಾಜಕೀಯವಾಗಿ ನಿಧಿಗಳಂತೆ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.ಈಗ ಪಕ್ಷ ಬದಲಾಯಿಸುತ್ತಿರುವವರೆಲ್ಲರೂ ಎನ್‌ಡಿಎ ವಿರುದ್ಧವಾಗಿ, ಎಂವಿಎ ಮತ್ತು ಇಂಡಿಯಾ ಮೈತ್ರಿಕೂಟದಡಿ ಗೆಲುವು ಸಾಧಿಸಿದ್ದಾರೆ. ಇವರೆಲ್ಲರಿಗೂ ಚುನಾವಣೆಯಲ್ಲಿ ಶಿವಸೇನೆ(ಯುಬಿಟಿ), ಕಾಂಗ್ರೆಸ್, ಎನ್​ಸಿಪಿ(ಎಸ್​ಪಿ) ಪಕ್ಷಗಳ ನಾಯಕರು ಪ್ರಚಾರ ಮಾಡಿದ್ದರು. ಈಗ ಸೈದ್ಧಾಂತಿಕ ವಾದಗಳ ಮೂಲಕ ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com