

ಜೈಪುರದಲ್ಲಿ ಹಿಂದೂ ಧರ್ಮೀಯರು ಇಂದು ಮುಸಲ್ಮಾನರ ಪವಿತ್ರ ಹಬ್ಬ ಈದ್ ಅಲ್-ಫಿತರ್ ಆಚರಣೆಯಲ್ಲಿ ಭಾಗವಹಿಸಿ, ಈದ್ಗಾದಲ್ಲಿ ಮುಸಲ್ಮಾನರ ಮೇಲೆ ಹೂವಿನ ಮಳೆ ಸುರಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್ ಆಗಿದೆ. ಈ ಕಾರ್ಯಕ್ರಮವನ್ನು ಹಿಂದೂ–ಮುಸ್ಲಿಂ ಏಕತಾ ಸಮಿತಿ ಆಯೋಜಿಸಿದ್ದು, ಸೌಹಾರ್ದತೆಯನ್ನು ಉತ್ತೇಜಿಸುವ ಉದ್ದೇಶ ಇದಾಗಿತ್ತು ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.
ಸಮಾರಂಭದ ವಿಡಿಯೋಗಳಲ್ಲಿ ಪ್ರಾರ್ಥನೆಗಾಗಿ ಸೇರಿದ್ದ ಮುಸಲ್ಮಾನರ ಮೇಲೆ ಹಿಂದೂಗಳು ಹೂವಿನ ಮಳೆ ಸುರಿಸುತ್ತಿರುವುದು ಕಾಣುತ್ತದೆ. ರಾಜಸ್ಥಾನದ ಮುಖ್ಯ ಕಾಜಿ ಖಾಲಿದ್ ಉಸ್ಮಾನಿ ಅವರು ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಸಾವಿರಾರು ಮಂದಿ ಭಾಗವಹಿಸಿದ್ದರು. ಹಿಂದೂ
ಹನುಮಾನ್ ಜಯಂತಿ, ದಸರಾ, ರಾಮನವಮಿ ಮತ್ತು ಮಹಾ ಶಿವರಾತ್ರಿ ಆಚರಣೆ, ಮೆರವಣಿಗೆ ವೇಳೆ ಹಿಂದೂ-ಮುಸಲ್ಮಾನರ ಗಲಾಟೆ, ಗಲಭೆ ಮಧ್ಯೆ ಇಂತಹ ನಡೆ ಸಮಾಜದಲ್ಲಿ ಸೌಹಾರ್ದತೆಯನ್ನು ಮೂಡಿಸುತ್ತದೆ.
Advertisement