ಮಣಿಪುರದಲ್ಲಿ ನಿಷೇಧಿತ ಸಂಘಟನೆಯ ನಾಲ್ವರಿಗೆ ಗುಂಡಿಕ್ಕಿ ಹತ್ಯೆ

ನಿಷೇಧಿತ ಎನ್‌ಎಸ್‌ಸಿಎನ್ ಈಸ್ಟರ್ನ್ ಫ್ಲಾಂಕ್‌ನ ನಾಲ್ವರು ಸದಸ್ಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Manipur
ಮಣಿಪುರ
Updated on

ಮಣಿಪುರ: ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ನಿಷೇಧಿತ ಸಂಘಟನೆಯ ನಾಲ್ವರು ಸದಸ್ಯರಿಗೆ ವಿರೋಧಿ ಗುಂಪಿನ ಸದಸ್ಯರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಟ್ಟದ ಜಿಲ್ಲೆಯ ಹಾಂಗ್‌ಬೈ ಗ್ರಾಮದಲ್ಲಿ ಶನಿವಾರ ರಾತ್ರಿ 9 ಗಂಟೆಗೆ ಈ ಗುಂಡಿನ ದಾಳಿ ನಡೆದಿದ್ದು, ನಿಷೇಧಿತ ಎನ್‌ಎಸ್‌ಸಿಎನ್ ಈಸ್ಟರ್ನ್ ಫ್ಲಾಂಕ್‌ನ ನಾಲ್ವರು ಸದಸ್ಯರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಭಾನುವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಶವಗಳನ್ನು ವಶಪಡಿಸಿಕೊಂಡರು" ಎಂದು ಅವರು ಹೇಳಿದ್ದಾರೆ.

Manipur
ಮಣಿಪುರ: 27 ಕಚ್ಚಾ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ ಪೊಲೀಸರು

ನಿಷೇಧಿತ ಎನ್‌ಎಸ್‌ಸಿಎನ್ ಈಸ್ಟರ್ನ್ ಫ್ಲಾಂಕ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ವಿರೋಧಿ ಗುಂಪಿನ ಸದಸ್ಯರು ತನ್ನ ಆರು ಕಾರ್ಯಕರ್ತರಿದ್ದ ವಾಹನವನ್ನು ತಡೆದು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ನಾಲ್ವರು ಕಾರ್ಯಕರ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಿಷೇಧಿತ ಸಂಘಟನೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com