Tamil Nadu Election 2026: ಚುನಾವಣಾ ಚಿತ್ರಣ ಬದಲು; ಸೀಮಿತ ಕ್ಷೇತ್ರಗಳಲ್ಲಿ ಎಡಿಎಂಕೆ-ಡಿಎಂಕೆ ನಡುವೆ ನೇರ ಹಣಾಹಣಿ

ಎರಡೂ ಪಕ್ಷಗಳು ಮೈತ್ರಿ ಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾಡಿರುವ ರೀತಿ ನೋಡಿದರೆ, ಡಿಎಂಕೆ ತನ್ನ ಬಲವಾದ ಕ್ಷೇತ್ರಗಳನ್ನು ಕೂಡ ಮೈತ್ರಿ ಪಕ್ಷಗಳಿಗೆ ನೀಡಲು ಹೆಚ್ಚು ಸಿದ್ಧವಾಗಿದೆ.
M K Stalin and Edappadi K Palaniswamy
ಎಂ ಕೆ ಸ್ಟಾಲಿನ್ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ
Updated on

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣಾ ಕಣ ರಂಗೇರುತ್ತಿದೆ. ಈ ಬಾರಿ ದ್ರಾವಿಡ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಎರಡೂ ಪ್ರಮುಖ ಪಕ್ಷಗಳು ತಮ್ಮ ಮೈತ್ರಿ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಟ್ಟಿರುವುದರಿಂದ—ತಮಿಳುನಾಡಿನ ಚುನಾವಣೆಯ ಪ್ರಮುಖ ಗುರುತುಗಳಾದ ‘ರೈಸಿಂಗ್ ಸನ್’ ಮತ್ತು ‘ಟು ಲೀವ್ಸ್’ ಚಿಹ್ನೆಗಳಡಿ ಸ್ಪರ್ಧಿಸುವ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಿದೆ.

ಡಿಎಂಕೆ ತನ್ನ ಬಲವಾದ ಕ್ಷೇತ್ರಗಳನ್ನೇ ಮೈತ್ರಿಗಳಿಗೆ ನೀಡಿದೆ

ಎರಡೂ ಪಕ್ಷಗಳು ಮೈತ್ರಿ ಪಕ್ಷಗಳೊಂದಿಗೆ ಸ್ಥಾನ ಹಂಚಿಕೆ ಮಾಡಿರುವ ರೀತಿ ನೋಡಿದರೆ, ಡಿಎಂಕೆ ತನ್ನ ಬಲವಾದ ಕ್ಷೇತ್ರಗಳನ್ನು ಕೂಡ ಮೈತ್ರಿ ಪಕ್ಷಗಳಿಗೆ ನೀಡಲು ಹೆಚ್ಚು ಸಿದ್ಧವಾಗಿದೆ. ಕಠಿಣ ಪೈಪೋಟಿ ಇರುವ ದುರ್ಬಲ ಕ್ಷೇತ್ರಗಳಲ್ಲಿ ತನ್ನದೇ ಚಿಹ್ನೆಯಲ್ಲಿ ಸ್ಪರ್ಧಿಸಲು ಆಯ್ಕೆ ಮಾಡಿಕೊಂಡಿದೆ. ಇದಕ್ಕೆ ವಿರುದ್ಧವಾಗಿ, ಎಐಎಡಿಎಂಕೆ ತನ್ನ ಬಲವಾದ ಕ್ಷೇತ್ರಗಳಲ್ಲಿ ತಾನೇ ಸ್ಪರ್ಧಿಸಲು ಇಚ್ಛಿಸುತ್ತಿದ್ದು, ಕಠಿಣ ಕ್ಷೇತ್ರಗಳನ್ನು ಮೈತ್ರಿಗಳಿಗೆ ಹಂಚುತ್ತಿರುವಂತೆ ಕಾಣುತ್ತದೆ.

2021ರಲ್ಲಿ ಎಐಎಡಿಎಂಕೆ ಗೆದ್ದ 66 ಸ್ಥಾನಗಳಲ್ಲಿ 62 ಸ್ಥಾನಗಳನ್ನು (94%) ಈ ಬಾರಿ ಉಳಿಸಿಕೊಂಡಿದೆ. ಡಿಎಂಕೆ 2021ರಲ್ಲಿ 133 ಸ್ಥಾನಗಳನ್ನು ಗೆದ್ದಿದ್ದು, ಅವುಗಳಲ್ಲಿ 119 (89.5%) ಸ್ಥಾನಗಳನ್ನು ಉಳಿಸಿಕೊಂಡು ಉಳಿದ 14 ಸ್ಥಾನಗಳನ್ನು ಮೈತ್ರಿಗಳಿಗೆ ನೀಡಿದೆ. ಡಿಎಂಕೆ ಮೈತ್ರಿ ಪಕ್ಷಗಳು ತಮ್ಮ ಗೆದ್ದ 26 ಸ್ಥಾನಗಳಲ್ಲಿ 24ನ್ನು ಉಳಿಸಿಕೊಂಡಿವೆ. ಆದರೆ ಮೈತ್ರಿಯೊಳಗೆ ಸ್ವಲ್ಪ ಬದಲಾವಣೆಗಳಾಗಿವೆ. ಮತ್ತೊಂದೆಡೆ, ಎಐಎಡಿಎಂಕೆ ಮೈತ್ರಿ ಪಕ್ಷಗಳು ಗೆದ್ದ 9 ಸ್ಥಾನಗಳಲ್ಲಿ ಕೇವಲ 5ನ್ನು ಮಾತ್ರ ಉಳಿಸಿಕೊಂಡಿದ್ದು, ಉಳಿದ 5 ಸ್ಥಾನಗಳು ಎಐಎಡಿಎಂಕೆಗೆ ಹೋಗಿವೆ.

M K Stalin and Edappadi K Palaniswamy
TVK Vijay ನೂರಾರು ಕೋಟಿಗಳ ಒಡೆಯ; ತಂದೆ-ತಾಯಿ, ಮಕ್ಕಳಿಗೂ ಸಾಲ ಕೊಟ್ಟಿದ್ದಾರಾ? ಅಫಿಡವಿಟ್ಟಿನಲ್ಲಿ ನಮೂದು

ಡಿಎಂಕೆ ಹೆಚ್ಚು ಪ್ರಭಾವಿ ಅಭ್ಯರ್ಥಿಗಳ ವಿರುದ್ಧ ನೇರ ಪೈಪೋಟಿ

ಆಡಳಿತ ಪಕ್ಷವಾದ ಡಿಎಂಕೆ, ಎಐಎಡಿಎಂಕೆಯ ಪ್ರಮುಖ ನಾಯಕರ ವಿರುದ್ಧ ನೇರವಾಗಿ ಪೈಪೋಟಿ ನಡೆಸಲು ಸಿದ್ಧವಿರುವುದು ಸ್ಪಷ್ಟವಾಗಿದೆ. ಎಐಎಡಿಎಂಕೆಯ ಮೊದಲ ಪಟ್ಟಿಯಲ್ಲಿ 23 ಪ್ರಮುಖ ಅಭ್ಯರ್ಥಿಗಳ ಹೆಸರುಗಳಿದ್ದು, ಇದರಲ್ಲಿ ಸಾಮಾನ್ಯ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸೇರಿದಂತೆ ಹಲವು ಮಾಜಿ ಸಚಿವರು ಇದ್ದಾರೆ. ಇವರಲ್ಲಿ 19 ಮಂದಿ ಡಿಎಂಕೆ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಲಿದ್ದಾರೆ.

ಇದಲ್ಲದೆ, ಪಳನಿಸ್ವಾಮಿ (ಎಡಪ್ಪಾಡಿ), ಎಸ್.ಪಿ. ವೇಲುಮಣಿ (ತೊಂಡಾಮುತ್ತೂರು), ಡಾ. ಸಿ. ವಿಜಯಭಾಸ್ಕರ್ (ವಿರಾಲಿಮಲೈ), ಕದಂಬೂರು ಸಿ. ರಾಜು (ಕೋವಿಲ್ಪಟ್ಟಿ), ಮತ್ತು ಡಿ. ಜಯಕುಮಾರ್ (ರಾಯಪುರಂ) ಸೇರಿದ್ದಾರೆ.

ಡಿಎಂಕೆ ಸಚಿವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳಲ್ಲಿ ಎಐಎಡಿಎಂಕೆ ಹೆಚ್ಚಿನ ಸ್ಥಾನಗಳನ್ನು ತನ್ನ ಮೈತ್ರಿ ಪಕ್ಷಗಳಿಗೆ ನೀಡಿದೆ. ಬಿಜೆಪಿಗೆ ನೀಡಿದ 27 ಸ್ಥಾನಗಳಲ್ಲಿ ಕನಿಷ್ಠ 7 ಸ್ಥಾನಗಳು ಡಿಎಂಕೆಯ ಪ್ರಸ್ತುತ ಸಚಿವರು ಅಥವಾ ಹಿರಿಯ ನಾಯಕರ ಹಿಡಿತದಲ್ಲಿವೆ. ಎಎಂಕೆಕೆ (AMMK) ಗೆ ನೀಡಿದ 11 ಸ್ಥಾನಗಳಲ್ಲಿ 3 ಸ್ಥಾನಗಳು ಬಲಿಷ್ಠ ಡಿಎಂಕೆ ಅಭ್ಯರ್ಥಿಗಳಾಗಿರುವ ಮಾಸುಬ್ರಹ್ಮಣಿಯನ್ (ಸೈದಾಪೇಟ್), ಟಿಆರ್ಬಿ ರಾಜಾ (ಮನ್ನಾರ್ಗುಡಿ), ಮತ್ತು ಕೆ.ಎನ್. ನೆಹರು (ತಿರುಚಿ ಪಶ್ಚಿಮ) ಅವರ ಕ್ಷೇತ್ರಗಳಾಗಿವೆ. ಟಿಎಂಸಿ (TMC) ಗೆ ನೀಡಿದ 5 ಸ್ಥಾನಗಳಲ್ಲಿ, ಅದು ಬಿಜೆಪಿ ಚಿಹ್ನೆಯಲ್ಲಿ ಸ್ಪರ್ಧಿಸುವುದಾಗಿ, 3 ಸ್ಥಾನಗಳು ಡಿಎಂಕೆ ಸಚಿವರ ಕೈಯಲ್ಲಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com