

ಶ್ರೀನಗರ: ಸೋಮವಾರ ಬೆಳಿಗ್ಗೆ ಪಶ್ಚಿಮಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ರಾಜ್ಯಗಳಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವಂತೆಯೇ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಅಚ್ಚರಿ ಪ್ರತಿಕ್ರಿಯೆ ನೀಡಿದ್ದಾರೆ.
ಐದೂ ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿರುವಾಗ ಒಮರ್ ಅಬ್ದುಲ್ಲಾ ಅನೌಪಚಾರಿಕ ಬ್ರಿಟಿಷ್ ಪದಗುಚ್ಛವನ್ನು ಬಳಸಿ ತಮ್ಮ ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದಾರೆ. "ರಕ್ತಸಿಕ್ತ ನರಕ" ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಬೆಳಿಗ್ಗೆ 11 ಗಂಟೆಗೆ ಎಕ್ಸ್ನಲ್ಲಿ ಆಘಾತವನ್ನು ಪ್ರತಿನಿಧಿಸುವ ಎಮೋಟಿಕಾನ್ನೊಂದಿಗೆ ಪೋಸ್ಟ್ ಮಾಡಿದ್ದಾರೆ.
ಬಳಿಕ 'ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ಭೂಕಂಪವನ್ನು' ವೀಕ್ಷಿಸುತ್ತಿರುವುದಾಗಿ ಹೇಳಿ ಮತ್ತೆ ಪೋಸ್ಟ್ ಮಾಡಿದ್ದಾರೆ. "ಈ ಫಲಿತಾಂಶಗಳ ನಂತರದ ಆಘಾತಗಳು ದೀರ್ಘಕಾಲದವರೆಗೆ, ಬಹುಶಃ 2029 ರವರೆಗೆ ಅನುಭವಿಸಲ್ಪಡುತ್ತವೆ" ಎಂದು ಅಬ್ದುಲ್ಲಾ ಹೇಳಿದರು.
ಮಧ್ಯಾಹ್ನದ ವೇಳೆಗೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 199 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ, ಇದನ್ನು ಬಿಜೆಪಿ ಪಕ್ಷಕ್ಕೆ ಮಿಷನ್ ಇಂಪಾಸಿಬಲ್ ಎಂದು ದೀರ್ಘಕಾಲದಿಂದ ಪರಿಗಣಿಸಲಾಗಿತ್ತು.
ತಮಿಳುನಾಡಿನಲ್ಲಿ, ವಿಜಯ್ ಅವರ ಪಕ್ಷವಾದ ಟಿವಿಕೆ, ತನ್ನ ಪದಾರ್ಪಣೆ ಚುನಾವಣೆಯಲ್ಲೇ ಅಭೂತಪೂರ್ವ ಸಾಧನೆ ಮಾಡಿದ್ದು, ಬರೊಬ್ಬರಿ 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ. 56 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ಡಿಎಂಕೆ ಮೂರನೇ ಸ್ಥಾನದಲ್ಲಿದೆ.
ಕೇರಳದಲ್ಲಿ, ಚುನಾವಣೋತ್ತರ ಸಮೀಕ್ಷೆಗಳು ಊಹಿಸಿದಂತೆ ಕಾಂಗ್ರೆಸ್ ಮೈತ್ರಿಕೂಟ ಯುಡಿಎಫ್ 85 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಅಂದಹಾಗೆ ಇಂದು ಶ್ರೀನಗರದಲ್ಲಿ ನಾಗರಿಕ ಸಚಿವಾಲಯ ಪುನರಾರಂಭ, Darbar Move ಪುನರಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗೌರವ ರಕ್ಷೆ ಸ್ವೀಕರಿಸಿದರು.
Advertisement