ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ: GRP ಕಾನ್‌ಸ್ಟೆಬಲ್ ಕಟ್ಟಿಹಾಕಿ ಬರ್ಬರ ಹತ್ಯೆ

ಒಡಿಶಾದ ರಾಜಧಾನಿ ಭುವನೇಶ್ವರದ ಬಲಿಯಾಂತ ಪೊಲೀಸ್ ಠಾಣೆ ಪ್ರದೇಶದ ಭಿಂಗ್ರಾಪುರ ಪ್ರದೇಶದಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಿಆರ್‌ಪಿ ಕಾನ್‌ಸ್ಟೆಬಲ್‌ ಮೇಲೆ ಸ್ಥಳೀಯರ ಗುಂಪೊಂದು ಕ್ರೂರವಾಗಿ ಥಳಿಸಿದೆ.
Soumya Ranjan Swain
ಸೌಮ್ಯ ರಂಜನ್ ಸ್ವೈನಿ
Updated on

ಒಡಿಶಾದ ರಾಜಧಾನಿ ಭುವನೇಶ್ವರದ ಬಲಿಯಾಂತ ಪೊಲೀಸ್ ಠಾಣೆ ಪ್ರದೇಶದ ಭಿಂಗ್ರಾಪುರ ಪ್ರದೇಶದಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜಿಆರ್‌ಪಿ ಕಾನ್‌ಸ್ಟೆಬಲ್‌ ಮೇಲೆ ಸ್ಥಳೀಯರ ಗುಂಪೊಂದು ಕ್ರೂರವಾಗಿ ಥಳಿಸಿದೆ. ಪರಿಣಾಮ ಕಾನ್‌ಸ್ಟೆಬಲ್ ಹಲ್ಲೆಯಿಂದ ಸಾವನ್ನಪ್ಪಿದ್ದು ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬೈಕ್ ಡಿಕ್ಕಿಯಿಂದಾಗಿ ಎರಡೂ ಕಡೆಯವರ ನಡುವೆ ತೀವ್ರ ವಾಗ್ವಾದ ನಡೆಯಿತು. ನಂತರ ಪುರುಷರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಗದ್ದಲ ಮತ್ತು ಸಹಾಯಕ್ಕಾಗಿ ಮಹಿಳೆಯರ ಕೂಗು ಕೇಳಿ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿದರು. ಗುಂಪು ಇಬ್ಬರು ಪುರುಷರನ್ನು ಬಲವಂತವಾಗಿ ಹಿಡಿದು, ಬಿದಿರಿನ ಕೋಲುಗಳಿಂದ ಕೈಕಾಲುಗಳನ್ನು ಕಟ್ಟಿ, ಕ್ರೂರವಾಗಿ ಥಳಿಸಿತು.

Soumya Ranjan Swain
ಪಶ್ಚಿಮ ಬಂಗಾಳದ ರಾಜಕೀಯ ಹಿಂಸಾಚಾರ: 13 ವರ್ಷಗಳಲ್ಲಿ ಸುವೇಂದು ಅಧಿಕಾರಿಯ 3 ಆಪ್ತರ ಬರ್ಬರ ಹತ್ಯೆ

ಕ್ರೂರವಾಗಿ ಥಳಿಸಲ್ಪಟ್ಟ ಇಬ್ಬರು ಯುವಕರನ್ನು ತಕ್ಷಣ ಗಂಭೀರ ಸ್ಥಿತಿಯಲ್ಲಿ ಕ್ಯಾಪಿಟಲ್ ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ಒಬ್ಬರಾದ ಸೌಮ್ಯ ರಂಜನ್ ಸ್ವೈನ್, ಸರ್ಕಾರಿ ರೈಲ್ವೆ ಪೊಲೀಸರೊಂದಿಗೆ (GRP) ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಇನ್ನೊಬ್ಬ ಓಂ ಪ್ರಕಾಶ್ ರಾವತ್ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಗಾಯಗೊಂಡ ಯುವಕ ಓಂ ಪ್ರಕಾಶ್ ರಾವತ್ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com