ಮಂಡ್ಯದ ಗೆಜ್ಜಲಗೆರೆಯಲ್ಲಿ ಹಾಕಿದ ಬೃಹತ್ ಟೆಂಟ್ ನಲ್ಲಿ ಅಭಿಷೇಕ್-ಅವಿವಾ ವಿವಾಹ ಪ್ರಯುಕ್ತ ಬೀಗರ ಊಟ ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಜನ ಔತಣಕೂಟದಲ್ಲಿ ಭಾಗವಹಿಸಿದ್ದರು
ಮಂಡ್ಯದ ಗೆಜ್ಜಲಗೆರೆಯಲ್ಲಿ ಹಾಕಿದ ಬೃಹತ್ ಟೆಂಟ್ ನಲ್ಲಿ ಅಭಿಷೇಕ್-ಅವಿವಾ (Abhishek-Aviva) ವಿವಾಹ ಪ್ರಯುಕ್ತ ಬೀಗರ ಊಟ ಏರ್ಪಡಿಸಲಾಗಿತ್ತು. ಸುಮಾರು ಒಂದು ಲಕ್ಷ ಜನ ಔತಣಕೂಟದಲ್ಲಿ ಭಾಗವಹಿಸಿದ್ದರು.
ಔತಣ ಕೂಟಕ್ಕೆ ಅಂಬರೀಷ್ ಅಭಿಮಾನಿಯೊಬ್ಬರು ಎತ್ತಿಗೆ ವಿಶೇಷವಾಗಿ ಅಲಂಕಾರ ಮಾಡಿ ಹಣೆಯ ಮುದೆ ಅಂಬಿ-ಸುಮಲತಾ ಫೋಟೋ ಇಟ್ಟು ಬೆನ್ನಿನಲ್ಲಿ ಅಭಿಷೇಕ್-ಅವಿವಾ ಚಿತ್ರಗಳನ್ನು ಬಿಡಿಸಿ ಅವರ ಹೆಸರನ್ನು ಬರೆದು ತಂದಿದ್ದರು.
ಎತ್ತಿನ ದೇಹದಲ್ಲಿ ವಿಶೇಷ ಅಲಂಕಾರ ಮಾಡಿ ತಂದದ್ದು ಬೀಗರಕೂಟದಲ್ಲಿ ಎಲ್ಲರ ಗಮನ ಸೆಳೆಯಿತು. ಫೋಟೋ ಮುಂದೆ ಅಂಬಿ ಕುಟುಂಬ ಫೋಸ್ ನೀಡಿ ಖುಷಿಯಿಂದ ಫೋಟೋ ತೆಗೆಸಿಕೊಂಡರು.
ಅಭಿಷೇಕ್-ಅವಿವಾ ಬೀಗರ ಔತಣಕೂಟಕ್ಕೆ ಆಗಮಿಸಿದ್ದ ಅಂಬರಿಶ್ ಅಭಿಮಾನಿ ನೂತನ ವಧು-ವರರಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.