ಕೃಷಿ ಕಾಯ್ದೆ ರದ್ದು: ಮೋದಿ ಐತಿಹಾಸಿಕ ಘೋಷಣೆಗೆ ಕಾರಣವಾದ ರೈತರ ಹೋರಾಟದ ಹಾದಿ...
ಸೆಪ್ಟೆಂಬರ್ 27, 2020: ಮೂರು ಕೃಷಿ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ, ಕಾನೂನಾಗಿ ಅಧಿಸೂಚನೆ
ಕೇಂದ್ರ ಸರ್ಕಾರ ಕೊನೆಗೂ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದ, ದೇಶದ ಹಲವು ರಾಜ್ಯಗಳ ರೈತರು ವಿರೋಧಿಸುತ್ತಿದ್ದ ಮೂರು ನೂತನ ಕೃಷಿ ಕಾಯ್ದೆಗಳನ್ನು (Farmers law) ವಾಪಸ್ ಪಡೆಯುವ ಮಹತ್ವದ ನಿರ್ಧಾರವನ್ನು ಮಾಡಿದೆ.
ಸೆಪ್ಟೆಂಬರ್ 27, 2020: ಮೂರು ಕೃಷಿ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ, ಕಾನೂನಾಗಿ ಅಧಿಸೂಚನೆ
ನವೆಂಬರ್ 25, 2020: ಪಂಜಾಬ್ ಮತ್ತು ಹರಿಯಾಣ ರೈತ ಸಂಘಟನೆಗಳಿಂದ ‘ದೆಹಲಿ ಚಲೋ’ ಚಳವಳಿಗೆ ಕರೆ
ನವೆಂಬರ್ 28, 2020: ದೆಹಲಿ ಗಡಿಗಳನ್ನು ಖಾಲಿ ಮಾಡುವ ಮತ್ತು ಬುರಾರಿಯಲ್ಲಿ ಗೊತ್ತುಪಡಿಸಿದ ಪ್ರತಿಭಟನಾ ಸ್ಥಳಕ್ಕೆ ತೆರಳುವ ಕುರಿತು ಮಾತುಕತೆ ನಡೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರಸ್ತಾಪ ತಿರಸ್ಕರಿಸಿದ ರೈತರು.
ಡಿಸೆಂಬರ್ 8, 2020: ಭಾರತ್ ಬಂದ್ಗೆ ಕರೆ ನೀಡಿದ ರೈತರು. ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದು, ಇತರ ರಾಜ್ಯಗಳ ರೈತರಿಂದಲೂ ಬೆಂಬಲ.
ಡಿಸೆಂಬರ್ 11, 2020: ಭಾರತೀಯ ಕಿಸಾನ್ ಯೂನಿಯನ್ ಕೃಷಿ ಕಾನೂನುಗಳ ವಿರುದ್ಧ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತು.
ಜನವರಿ 12, 2021: ಮೂರು ಕೃಷಿ ಕಾನೂನುಗಳ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು ಮತ್ತು ಸಂಬಂಧಪಟ್ಟ ಎಲ್ಲಾ ಪಕ್ಷಗಳನ್ನು ಸಂಪರ್ಕಿಸಿದ ನಂತರ ಶಿಫಾರಸು ಮಾಡಲು ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿತು.
ಜನವರಿ 26, 2021: ಗಣರಾಜ್ಯೋತ್ಸವದಂದು, ರೈತ ಸಂಘಟನೆಗಳಿಂದ ಟ್ರಾಕ್ಟರ್ ಪರೇಡ್, ಸಾವಿರಾರು ರೈತರು, ಕಾನೂನು ವಿರೋಧಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ. ಕೆಂಪು ಕೋಟೆಗೆ ನುಗ್ಗಿ ನಿಶಾನ್ ಸಾಹಿಬ್ ಧ್ವಜ ಹಾರಿಸಲಾಯಿತು.
ಆಗಸ್ಟ್ 7, 2021: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ದೆಹಲಿಯ ಜಂತರ್ ಮಂತರ್ನಲ್ಲಿ ಕಿಸಾನ್ ಸಂಸದ್ಗೆ ಭೇಟಿ ನೀಡಿ ಪ್ರತಿಭಟನಾ ನಿರತ ರೈತರಿಗೆ ತಮ್ಮ ಬೆಂಬಲ ಸೂಚಿಸಿದರು.
ಅಕ್ಟೋಬರ್ 3, 2021: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸೇರಿದ ಎಸ್ಯುವಿಯು ಪ್ರತಿಭಟನಾ ನಿರತ ರೈತರ ಮೇಲೆ ಹರಿದು ಐವರನ್ನು ಬಲಿ ಪಡೆದಿತು.
ನವೆಂಬರ್ 19, 2021: ಗುರುಪುರಬ್ನಲ್ಲಿ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದರು.