ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ವಕಾಲತ್ತು ವಹಿಸಿದ ಕಾಂಗ್ರೆಸ್ನ ಹಿರಿಯ ಮುಖಂಡ ಎಂ.ವಿ.ರಾಜಶೇಖರನ್ ಅವರ ವಿರುದ್ಧ ಕಾಂಗ್ರೆಸ್ನ ಮುಖ್ಯ ಸಚೇತಕ ಅಶೋಕ ಪಟ್ಟಣ್ ತೀರಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ರಾಜಶೇಖರನ್ ಅವರನ್ನು ಏಕವಚನದಲ್ಲಿ(ಅವನು) ಎಂದು ನಿಂದಿಸಿದ ಅಶೋಕ್ ಪಟ್ಟಣ, ಹರ ಹರ ಎಂದು ಹೇಳುವ ವಯಸ್ಸಿನಲ್ಲಿ ರಾಜಶೇಖರನ್ ಗೊಂದಲಸೃಷ್ಟಿಸುತ್ತಿದ್ದಾರೆ. ಪರಮೇಶ್ವರ ಅವರ ಪರ ಬ್ಯಾಟಿಂಗ್ ಮಾಡುತ್ತಿರುವ ಅವರು ಮತ್ತೊಮ್ಮೆ ರಾಜ್ಯಸಭೆ ಸದಸ್ಯತ್ವದ ಮೇಲೆ ಕಣ್ಣಿಟ್ಟು ಈ ರೀತಿ ಮಾತನಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪ ಅವರ ಅಳಿಯ ಎಂಬುದನ್ನು ಬಿಟ್ಟರೆ ಅವರಿಗೆ ಇನ್ನೇನು ಅರ್ಹತೆ ಇದೆ? ರಾಜಶೇಖರನ್ ಅವರು ಇದೇ ರೀತಿ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದರೆ ಅವರ ಮನೆ ಮುಂದೆ ಧರಣಿ ನಡೆಸಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ. ಆದರೆ, ರಾಜಶೇಖರನ್ ಅವರನ್ನು ಅಶೋಕ್ ಪಟ್ಟಣ್ ನಿಂದಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ನಿರಾಕರಿಸಿದ್ದಾರೆ.
Advertisement