ಕಾಂಗ್ರೆಸ್‍ಗೆ ಸೇರಿ: ಶಾಸಕ ಬಾಲಕೃಷ್ಣಗೆ ಡಿಕೆಶಿ ಆಹ್ವಾನ

ಜೆಡಿಎಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಭಾನುವಾರ ರಾಮನಗರ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ...
ಡಿ.ಕೆ. ಶಿವಕುಮಾರ್‍
ಡಿ.ಕೆ. ಶಿವಕುಮಾರ್‍

ಮಾಗಡಿ: ಜೆಡಿಎಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಭಾನುವಾರ ರಾಮನಗರ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ
ನೀಡಿದ್ದಾರೆ. ರಾಮನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಆಹ್ವಾನದ ಕುರಿತು ಮಾಧ್ಯಮ ದವರಿಗೆ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ಇನ್ನು ಎರಡು ಮೂರು ವರ್ಷ ಪಕ್ಷ ಬಿಡುವ ವಿಚಾರ ಮಾಡಿಲ್ಲ. ಮುಂದಿನ ಚುನಾವಣೆ ಪರಿಸ್ಥಿತಿಯನ್ನು ನೋಡಿ ಯಾವ ಪಕ್ಷಕ್ಕೆ ಸೇರಬೇಕೆಂದು ತೀರ್ಮಾನಿಸುತ್ತೇನೆ ಎಂದು ಸಚಿವ ಡಿ.ಕೆ. ಶಿವಕುಮಾರ್‍ಗೆ ತಿಳಿಸಿರುವುದಾಗಿ ದೂರವಾಣಿ ಮೂಲಕ ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com