ಇದೇ ನನ್ನ ಕಡೆ ಚುನಾವಣೆ

ನಾನು ಇನ್ನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ' - ಹೀಗೆಂದು ಲೋಕಸಭೆಯಲ್ಲಿ ಬುಧವಾರ..
ಲೋಕಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ (ಸಂಗ್ರಹ ಚಿತ್ರ)
ಲೋಕಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ (ಸಂಗ್ರಹ ಚಿತ್ರ)

ನವದೆಹಲಿ: `ನಾನು ಇನ್ನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ' - ಹೀಗೆಂದು ಲೋಕಸಭೆಯಲ್ಲಿ ಬುಧವಾರ ಘೋಷಣೆ ಮಾಡಿದ್ದು ಮಾಜಿ ಪ್ರಧಾನಿ, ಹಾಸನ ಸಂಸದ ಎಚ್.ಡಿ.ದೇವೇಗೌಡ. ರಾಷ್ಟ್ರಪತಿ ಭಾಷಣಕ್ಕೆ ವಂದನಾರ್ಪಣೆ ಗೊತ್ತುವಳಿ ಮೇಲಿನ ಚರ್ಚೆಯಲ್ಲಿ ಮಾತನಾಡಿದ ವೇಳೆ ಮಾಜಿ ಪ್ರಧಾನಿ ಈ ವರೆಗೆ 15 ಚುನಾವಣೆಗಳಲ್ಲಿ ತಾವು ಸ್ಪರ್ಧೆ ಮಾಡಿದ್ದಾಗಿ ತಿಳಿಸಿದ ಗೌಡರು, ಆ ಪೈಕಿ ಎರಡರಲ್ಲಿ ಮಾತ್ರ ಸೋತಿದ್ದಾಗಿ ನೆನಪಿಸಿಕೊಂಡರು.

`ನನ್ನ ರಾಜಕೀಯ ಜೀವನದ ಹೆಚ್ಚಿನ ಅವ„ಯನ್ನು ಕರ್ನಾಟಕದಲ್ಲೇ ಕಳೆದಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ನಾನು ದೆಹಲಿ ರಾಜಕೀಯದತ್ತ ಮನಸ್ಸು ಮಾಡಿದ್ದೇನೆ' ಎಂದರು.

ಅಭಿವೃದ್ಧಿ ಕಾರ್ಯಕ್ರಮವಿರಲಿ
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಬಹುಮತವಿದೆ. ಹೀಗಾಗಿ ಅಳುಕದೆ ಅಬಿsವೃದಿಟಛಿಪರ ನಿರ್ಣಯಗಳನ್ನು ಕೈಗೊಂಡು ಅದನ್ನು ಜಾರಿ ಮಾಡಬೇಕು ಎಂದು ದೇವೇಗೌಡರು ಪ್ರಧಾನಿಯವರನ್ನು ಒತ್ತಾಯಿಸಿದರು. ತಾವು ಪ್ರಧಾನಿಯಾಗಿದ್ದಾಗ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದೆ. ಅವುಗಳನ್ನು ಮುಂದುವರಿಸಿಕೊಂಡು ಹೋಗಿ ಎಂದು ಕೇಂದ್ರಕ್ಕೆ ಜೆಡಿಎಸ್ ವರಿಷ್ಠ ಸಲಹೆ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com