ನಾನು ಏನೂಂತ ತಿಳಿಯಲು ಕಾಗೋಡು ಮತ್ತೊಮ್ಮೆ ಹುಟ್ಟಿ ಬರಬೇಕು

ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಜನಾರ್ದನ ಪೂಜಾರಿ ಯಾರು ಎಂದು ಗೋತ್ತಾಗಬೇಕಾದರೆ...
ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ
ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ
Updated on

ಮಂಗಳೂರು: ಸ್ಪೀಕರ್ ಕಾಗೋಡು ತಿಮ್ಮಪ್ಪಗೆ ಜನಾರ್ದನ ಪೂಜಾರಿ ಯಾರು ಎಂದು ಗೋತ್ತಾಗಬೇಕಾದರೆ ಇನ್ನೊಮ್ಮೆ ಹುಟ್ಟಿ ಬರಬೇಕು. ಬಹುಶಃ ಅವರಿಗೆ ಅರಳು, ಮರಳು ಇರಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಗುಡುಗಿದ್ದಾರೆ.

ಪೂಜಾರಿ ಯಾರೆಂದು ಗೊತ್ತಿಲ್ಲ ಎನ್ನುವ ಕಾಗೋಡು ನಾನು ವಕೀಲ ಆಗಿದ್ದೆ ಎಂದಿದ್ದಾರೆ. ಅದು ಅವರಿಗೆ ಹೇಗೆ ತಿಳಿಯಿತು? ಪೂಜಾರಿ ಕೇಂದ್ರ ಸಚಿವರಾಗಿದ್ದಾಗ ನಿಮಗೆ ಚಿಗುರು ಮೀಸೆ ಬರ್ಲಿಲ್ಲ. ನಾನು ಕಾಂಗ್ರೆಸ್‌ನ ಚುನಾವಣಾ ಕೇಂದ್ರ ಸಮಿತಿಯಲ್ಲಿ ಇದ್ದಾಗ ಚುನಾವಣೆಗೆ ಸ್ಫರ್ಧಿಸಲು ಟಿಕೆಟ್ ಕೊಡಿಸಿಲ್ವಾ?

ನಿಮಗೆ ಈಗ ಗುರುತು ಸಿಗುವುದಿಲ್ಲವಾ? ಆ ಪರಿಸ್ಥಿತಿಗೆ ಬಂದಿದ್ದೀರಾ ಎಂದು ಪೂಜಾರಿ ವ್ಯಂಗ್ಯವಾಡಿದರು. 4 ಬಾರಿ ಸಂಸದನಾಗಿದ್ದೆ. 2 ಅವಧಿಗೆ ರಾಜ್ಯಸಭೆ ಸದಸ್ಯನಾಗಿದ್ದೆ. ಯಾವುದೇ ಬಿಸಿನೆಸ್ ಮಾಡುತ್ತಿಲ್ಲ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿಲ್ಲ. ನಾನು ಕುಡಿಯುವುದಿಲ್ಲ. ಪೂಜಾರಿ ಏನೆಂದು ತಿಳಿಯಲು ಇವರಿಗೆ ಇನ್ನೊಂದು ಜನ್ಮ ಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com