ಸರ್ಕಾರವೇ ಶುದ್ಧ ಗಾಳಿ ನಿರ್ಮಿಸಬೇಕಾಗುತ್ತೆ!: ಸಿ.ಎಚ್. ವಿಜಯಶಂಕರ್

ಹಸಿರೀಕರಣಕ್ಕೆ ಒತ್ತು ನೀಡದಿದ್ದರೆ ಎಲ್ಲಾ ನಗರಗಳಲ್ಲೂ ಶುದ್ಧ ಗಾಳಿ ಅಭಾವ ಉಂಟಾಗಿ ಸರ್ಕಾರ ಶುದ್ಧಗಾಳಿ ಘಟಕಗಳನ್ನೂ ಸ್ಥಾಪಿಸಬೇಕಾಗುತ್ತದೆ...
ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ)
ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ)

ವಿಧಾನಪರಿಷತ್ತು: ಹಸಿರೀಕರಣಕ್ಕೆ ಒತ್ತು ನೀಡದಿದ್ದರೆ ಎಲ್ಲಾ ನಗರಗಳಲ್ಲೂ ಶುದ್ಧ ಗಾಳಿ ಅಭಾವ ಉಂಟಾಗಿ ಸರ್ಕಾರ ಶುದ್ಧಗಾಳಿ ಘಟಕಗಳನ್ನೂ ಸ್ಥಾಪಿಸಬೇಕಾಗುತ್ತದೆ!

ಇದು ಬಿಜೆಪಿಯ ಹಿರಿಯ ಸದಸ್ಯ ಸಿ.ಎಚ್. ವಿಜಯಶಂಕರ್ ಅವರ ಆತಂಕ ಮತ್ತು ಸರ್ಕಾರವನ್ನು ಎಚ್ಚರಿಸಿದ ಮಾತು. ಸರ್ಕಾರದ ಇಲಾಖೆಗಳಲ್ಲಿ ಹಸಿರೀಕರಣ ಕಡ್ಡಾಯವಾಗಬೇಕೆನ್ನುವ ಬಗ್ಗೆ ಸದನದಲ್ಲಿ ಖಾಸಗಿ ನಿರ್ಣಯ ಮಂಡಿಸಿದ ಅವರು, ಸರ್ಕಾರದ ಗಿಡ ನೆಡುವುದನ್ನು ಕಡ್ಡಾಯಗೊಳಿಸಬೇಕು.

ಇಲ್ಲದಿದ್ದರೆ ನೀರಿನ ಸಮಸ್ಯೆ ಹೆಚ್ಚಾಗಿ ಈಗ ಎಲ್ಲೆಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುತ್ತಿರುವಂತೆ ಗಾಳಿಗೂ ಕೊರತೆ ಉಂಟಾಗಲಿದೆ. ಆಗ ಶುದ್ಧ ಗಾಳಿ ಇಲ್ಲದೆ ಶುದಟಛಿ ಗಾಳಿ ಘಟಕಗಳನ್ನು ಸ್ಥಾಪಿಸಿ ಪ್ರಾಣ ಉಳಿಸಿಕೊಳ್ಳುವ ಕಾಲ ಬರಲಿದೆ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com