ಲಾಲೂ ಪ್ರಸಾದ್ ದುರ್ಯೋಧನ ಮತ್ತು ಕಂಸನ ಪಾತ್ರ ಮಾಡುತ್ತಿದ್ದಾರೆ: ಪಪ್ಪು ಯಾದವ್

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕಂಸ ಮತ್ತು ಧುರ್ಯೋಧನನ ರೀತಿ ವರ್ತಿಸುತ್ತಿದ್ದಾರೆ...
ಪಪ್ಪು ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್
ಪಪ್ಪು ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್

ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಕಂಸ ಮತ್ತು ಧುರ್ಯೋಧನನ ರೀತಿ ವರ್ತಿಸುತ್ತಿದ್ದಾರೆ ಎಂದು ಉಚ್ಚಾಟಿತ ಆರ್ ಜೆಡಿ ಮುಖಂಡ ಪಪ್ಪು ಯಾದವ್ ಟೀಕಿಸಿದ್ದಾರೆ.

ಆರ್ ಜೆಡಿಯಿಂದ ಉಚ್ಚಾಟನೆಗೊಂಡ ನಂತರ ಜನ್ ಅಧಿಕಾರ್ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿಸ ಮಾಧೇಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಪಪ್ಪು ಯಾದವ್ ತಮ್ಮ ಗುರುವಿನ ವಿರುದ್ದವೇ ತಿರುಗಿ ಬಿದ್ದಿದ್ದಾರೆ,

ಕೃಷ್ಣನ ವಂಶಸ್ಥನಾಗಿರುವ ನಾನು, ಯಾದವ ಜನಾಂಗದ ವಿರುದ್ದ ಕಂಸ ಹಾಗೂ ಧುರ್ಯೋಧನನಂತೆ ವರ್ತಿಸುತ್ತಿರುವ ಲಾಲು ಪ್ರಸಾದ್ ಯಾದವ್ ವಿರುದ್ದ ಹೋರಾಡುತ್ತೇನೆ ಎಂದು ಹೇಳಿದರು.

ಲಾಲು ಪ್ರಸಾದ್ ಯಾದವ್ ರಾಜಕೀಯ ಅನಕ್ಷರಸ್ಥ ಎಂದು ವಾಗ್ದಾಳಿ ನಡೆಸಿದ ಪ್ಪು ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ  ರಾಜಕೀಯ ದೂರದೃಷ್ಠಿ ಇದೆ ಎಂದು ಹೊಗಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com