ಸಿದ್ದು ಪರ ನಾಣಯ್ಯ ಬ್ಯಾಟಿಂಗ್

ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಮಾಜಿ ಸಚಿವ ಎಂ.ಸಿ.ನಾಣಯ್ಯ ಬ್ಯಾಟಿಂಗ್...
ಎಂ.ಸಿ.ನಾಣಯ್ಯ
ಎಂ.ಸಿ.ನಾಣಯ್ಯ

ಬೆಂಗಳೂರು: ಅರ್ಕಾವತಿ ಡಿನೋಟಿಫಿ ಕೇಶನ್ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಮಾಜಿ ಸಚಿವ ಎಂ.ಸಿ.ನಾಣಯ್ಯ ಬ್ಯಾಟಿಂಗ್ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡುವ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಿಸಿರುವ ಅವರು, ಅರ್ಕಾವತಿ ಡಿನೋಟಿಫಿ ಕೇಶನ್ ಪ್ರಕರಣದಲ್ಲಿ ರೀಡೂ ಎಂಬ ಪದವನ್ನು ಟಂಕಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಈ ಬಗ್ಗೆ ಬೇಕಾದರೆ ನಾನು ಚರ್ಚೆಗೆ ಸಿದ್ಧ . ಆದರೆ ನನ್ನ ಅಬಿsಪ್ರಾಯಕ್ಕೂಪಕ್ಷಕ್ಕೂ ಸಂಬಂಧವಿಲ್ಲ. ನಾಣಯ್ಯ ಎಂಬ ವ್ಯಕ್ತಿಯಾಗಿ ಲಭ್ಯ ದಾಖಲೆ ಆಧರಿಸಿ ನಾನು ಈ ಮಾತು ಹೇಳುತ್ತಿದ್ದೇನೆ ಎಂದರು. ರೀ ಡೂ ಎಂಬ ಪದವನ್ನು ಮೊದಲು ಬಳಸಿದ್ದು ನ್ಯಾಯಾಲಯ. ಆನಂತರ ಆಡಳಿತಾತ್ಮಕವಾಗಿ ಆ ಪದವನ್ನು ಪ್ರಯೋಗಿಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲಬೇಕು. ಹೌಸಿಂಗ್ ಸೊಸೈಟಿಯೊಂದಕ್ಕೆಜಾಗ ನೀಡುವ ವಿಚಾರದಲ್ಲಿ ಶೆಟ್ಟರ್ ಸರ್ಕಾರಿ ಕಡತದಲ್ಲಿ ಈ ಪದ ಬಳಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com