ಗೃಹ ಸಚಿವರ ಕಾಲೆಳೆದ ವಿಪಕ್ಷ

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ವಿಧಾನಸಭೆಯಲ್ಲಿ ಮೂರನೇ ಸಾಲಿನಲ್ಲಿ ಸ್ಥಾನ ಕಲ್ಪಿಸಿರುವುದಕ್ಕೆ ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ಕಾಳಜಿ ಮೆರೆದಿವೆ!...
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ಸಂಗ್ರಹ ಚಿತ್ರ)
ಗೃಹ ಸಚಿವ ಡಾ.ಜಿ.ಪರಮೇಶ್ವರ್ (ಸಂಗ್ರಹ ಚಿತ್ರ)

ವಿಧಾನ ಪರಿಷತ್: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ವಿಧಾನಸಭೆಯಲ್ಲಿ ಮೂರನೇ ಸಾಲಿನಲ್ಲಿ ಸ್ಥಾನ ಕಲ್ಪಿಸಿರುವುದಕ್ಕೆ ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ಕಾಳಜಿ ಮೆರೆದಿವೆ!

ಮಧುಸೂದನ್ ಧರಣಿ ವೇಳೆ ಬಿಜೆಪಿಯವರನ್ನು ಕಿಚಾಯಿಸಿದ ಕಾಂಗ್ರೆಸ್ ಸದಸ್ಯರು, ನೀವು ಮಧುಸೂದನ್‍ಗೆ ಚುನಾವಣೆ ಟಿಕೆಟ್ ನೀಡಿಲ್ಲ. ಹೀಗಾಗಿ ಅವರು ಮುನಿಸಿಕೊಂಡಿದ್ದಾರೆ. ಪ್ರತಿಪಕ್ಷ ನಾಯಕರ ಮನವೊಲಿಕೆ ಮಾತೂ ಅವರು ಕೇಳುತ್ತಿಲ್ಲ ಎಂದರು.

ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್ ಸಹ, ಮಧುಸೂದನ್‍ಗೆ ಟಿಕೆಟ್ ಕೊಡಿ ಎಲ್ಲ ಸರಿ ಆಗುತ್ತದೆ ಎಂದರು. ಇದಕ್ಕೆ ಸಿಟ್ಟಿಗೆದ್ದ ಈಶ್ವರಪ್ಪ ಮತ್ತಿತರರು ಕಾಂಗ್ರೆಸ್ ಸ್ಥಿತಿ ಗೊತ್ತಿದೆ, ಪರಮೇಶ್ವರ್ ಅವರಿಗೆ ವಿಧಾನಸಭೆಯಲ್ಲಿ ಮೂರನೇ ಸಾಲಿನಲ್ಲಿ ಕುಳ್ಳಿರಿಸಿದ್ದೀರಿ ಎಂದು ವ್ಯಂಗ್ಯವಾಡಿದರು. ಪರಮೇಶ್ವರ್ ಮಾತ್ರ ಈ ವೇಳೆ ನಗುತ್ತಾ ಕುಳಿತಿದ್ದರು. ಅದೇ ರೀತಿ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಈಶ್ವರಪ್ಪ ನಿಲುವಳಿ ಮಂಡಿಸುವ ವೇಳೆ ಮಧ್ಯ ಪ್ರವೇಶಿಸಿದ ಸಭಾನಾಯಕ ಎಸ್.ಆರ್.ಪಾಟೀಲ್, ಗೃಹ ಇಲಾಖೆಗೆ ಸಮರ್ಥ ಸಚಿವರು ಬಂದಿದ್ದಾರೆ. ಅವರು ನೋಡಿಕೊಳ್ಳುತ್ತಾರೆ ಎಂದರು.

ಈ ಹೇಳಿಕೆಯೇ ಪ್ರತಿಪಕ್ಷಗಳಿಗೆ ಆಹಾರವಾಗಿ ಪರಿಣಮಿಸಿತು. ಈ ಹಿಂದಿನ ಗೃಹ ಸಚಿವರು ಅಸಮರ್ಥರಾಗಿದ್ದರೇ ಎಂದು ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು. ಸಭಾ ನಾಯಕರು ಸಾವರಿಸಿಕೊಂಡು, ನಮ್ಮ ಎಲ್ಲ ಸಚಿವರು ಸಮರ್ಥರೇ ಎಂದು ನಗುನಗುತ್ತಾ ಸಮಜಾಯಿಷಿ ನೀಡಿ ಪರಿಸ್ಥಿತಿ ನಿಭಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com