ಸಮಾಜದೆಡೆಗೆ ಆರ್ ಎಸ್ಎಸ್, ಬಿಜೆಪಿ ದೃಷ್ಟಿಕೋನ ದಾದ್ರಿ ಪ್ರಕರಣಕ್ಕೆ ಹೊಣೆ: ಕಾಂಗ್ರೆಸ್

ಸಮುದಾಯ ಮತ್ತು ಸಮಾಜದ ಬಗ್ಗೆ ಬಿಜೆಪಿ, ಆರ್.ಎಸ್.ಎಸ್, ಪ್ರಧಾನಿ ನರೆಂದ್ರ ಮೋದಿ ಅವರ ದೃಷ್ಟಿಕೋನ ದಾದ್ರಿ ಪ್ರಕರಣಕ್ಕೆ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್
ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್

ನವದೆಹಲಿ: ಸಮುದಾಯ ಮತ್ತು ಸಮಾಜದ ಬಗ್ಗೆ ಬಿಜೆಪಿ, ಆರ್.ಎಸ್.ಎಸ್, ಪ್ರಧಾನಿ ನರೆಂದ್ರ ಮೋದಿ ಅವರ ದೃಷ್ಟಿಕೋನ ದಾದ್ರಿ ಪ್ರಕರಣಕ್ಕೆ ಹೊಣೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಉತ್ತರ ಪ್ರದೇಶ ದಾದ್ರಿ ಎಂಬ ಊರಿನಲ್ಲಿ ಹಸುಗಳನ್ನು ಮುಸ್ಲಿಂ ಕುಟುಂಬವೊಂದು ಹತ್ಯೆ ಮಾಡಿ ಸೇವನೆ ಮಾಡಿದೆ ಎಂದು ಶಂಕಿಸಿದ ಗುಂಪೊಂದು ಮುಸ್ಲಿಂ ಕುಟುಂಬದ ಮೇಲೆ ದಾಳಿ ಮನೆಯಲ್ಲಿದ್ದ ಮಹಮ್ಮದ್ ಇಕ್ಲಾಕ್ (50) ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ "ದಾದ್ರಿಯ ಪ್ರಕರಣ ಅಪಾಯಕಾರಿ ಮತ್ತು ಭಯಾನಕವಾಗಿದೆ. ಆರ್.ಎಸ್.ಎಸ್ ಹಾಗೂ ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಹಲವು ವರ್ಷಗಳು ನಡೆಸಿದ ಕೆಲಸದ  ಪರಾಕಾಷ್ಠೆಯ ಪ್ರತೀಕ. ಸಮಾಜದೆಡೆಗೆ ಆರ್.ಎಸ್.ಎಸ್, ಪ್ರಧಾನಿ ನರೆಂದ್ರ ಮೋದಿ ಅವರ ದೃಷ್ಟಿಕೋನ ದಾದ್ರಿ ಪ್ರಕರಣಕ್ಕೆ ಹೊಣೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಹೇಳಿದ್ದಾರೆ. 
ಇಂತಹ ಘಟನೆಗಳು ನಡೆಯುವ ಸಮಾಜದಲ್ಲಿ ಬದುಕುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದು ಸಂದೀಪ್ ದೀಕ್ಷಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com