ಮಹೇಶ್ ಮಂಡೆಗದ್ದೆ, ನರಗುಂದದ ಪ್ರೇಮಾ ತಿಮ್ಮಣ್ಣ ಗೌಡರ್, ಮಹೇಶ್, ಜ್ಯೋತಿ ಎಂ.ಸಾಗರ್ ಅವರು ರಮೇಶ್ ಕುಮಾರ್ ವರದಿ ಅನು ಷ್ಠಾನಕ್ಕೆ ಆಗ್ರಹಿಸಿದ್ದರಿಂದ ಈ ವಿಚಾರ ಚರ್ಚೆಗೆ ಬರುವಂತಾಯಿತು. ರಾಹುಲ್ ಭಾಷಣಕ್ಕೆ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರಮೇಶ್ ಕುಮಾರ್ ವರದಿ ಅನುಷ್ಠಾನಕ್ಕೆ ಸರ್ಕಾರ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.