ನಡೆದದ್ದೇನು?: ಸಣಬದ ಕೊಪ್ಪಲಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಮೃತ ರೈತ ಲೋಕೇಶ್ ಅವರ ಪತ್ನಿಗೆ ರು.1 ಲಕ್ಷದ ಚೆಕ್ ನೀಡಿದ್ದರು. ದೊಡ್ಡ ದೊಡ್ಡ ನಾಯಕರೇ ಮನೆ ಬಳಿಗೆ ಬಂದಿದ್ದ ಗಲಿಬಿಲಿಯಲ್ಲಿ ಲೋಕೇಶ್ ಪತ್ನಿ ಚೆಕ್ ಅನ್ನು ಜಗುಲಿ ಮೇಲೆಯೇ ಬಿಟ್ಟುಬಿಟ್ಟಿದ್ದಾರೆ. ಜಗುಲಿ ಮೇಲೆ ಚೆಕ್ ಬಿದ್ದಿದ್ದನ್ನು ಗಮನಿಸಿದ್ದ ಸಚಿವ ಅಂಬರೀಷ್, ಆ ಚೆಕ್ನ್ನು ಸಂಸದ ಪುಟ್ಟರಾಜು ಕೈಗಿಟ್ಟು, ಲೋಕೇಶ್ ಪತ್ನಿ ಖಾತೆಗೆ ಜಮೆ ಮಾಡುವಂತೆ ಸೂಚಿಸಿದ್ದರು. ಇದಾದ ಕೆಲ ಹೊತ್ತಿನ ನಂತರ ಸಚಿವ ಅಂಬರೀಷ್ ಪುಟ್ಟರಾಜು ಅವರಿಗೆ ಕರೆ ಮಾಡಿ, ಚೆಕ್ನ್ನು ವಾಪಸ್ ಕಳುಹಿಸುವಂತೆ ತಿಳಿಸಿದ್ದರು ಎನ್ನಲಾಗಿದೆ. ಅದರಂತೆ ಪುಟ್ಟರಾಜು ಅವರು ಚೆಕ್ ಅನ್ನು ಅಂಬರೀಷ್ಗೆ ತಲುಪಿಸಿದ್ದಾರೆ. ಚೆಕ್ ನೇರವಾಗಿ ಕಾಂಗ್ರೆಸ್ ಕಚೇರಿಗೆ ಹೋಗಿದೆ ಎನ್ನಲಾಗಿದೆ. ಚೆಕ್ ಈ ವರೆಗೆ ನಮ್ಮ ಕೈಸೇರಿಲ್ಲ ಎನ್ನುತ್ತಾರೆ ಲೋಕೇಶ್ ಅವರ ಕುಟುಂಬಸ್ಥರು.