ವಾಸನ್ ಐ ಕೇರ್ ನೊಂದಿಗೆ ಆರ್ಥಿಕ ಸಂಬಂಧ ಇಲ್ಲ: ಪಿ.ಚಿದಂಬರಂ

ವಾಸನ್ ಐ ಕೇರ್ ನೊಂದಿಗೆ ಆರ್ಥಿಕ ಸಂಬಂಧ ಹೊಂದಿರುವುದನ್ನು ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಚಿದಂಬರಂ
ಚಿದಂಬರಂ

ಚೆನ್ನೈ: ವಾಸನ್ ಐ ಕೇರ್ ನೊಂದಿಗೆ ಆರ್ಥಿಕ ಸಂಬಂಧ ಹೊಂದಿರುವುದನ್ನು ಕೇಂದ್ರ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಸಂಸ್ಥೆಯ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಕೆಳಿಬಂದಿದ್ದು, ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಚಿಟ್ ಫಂಡ್ ಕಂಪನಿ ಮೂಲಕ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ವಾಸನ್ ಐ ಕೇರ್ ಗೆ ವರ್ಗಾವಣೆ ಮಾಡಿರುವ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಇದಕ್ಕೂ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರಿಗೂ ಸಂಬಂಧವಿದೆ ಎಂಬ ಅಂಶ ಬಯಲಾಗಿತ್ತು.
 ವಾಸನ್ ಐ ಕೇರ್ ನಲ್ಲಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ಪಾಲನ್ನು ಹೆಚ್ಚಿಸಲು ಜೆಡಿ ಗ್ರೂಪ್ ಹಾಗೂ ಇನ್ನಿತರ ಸಂಸ್ಥೆಗಳು ಶಾಮೀಲಾಗಿದ್ದವು. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಚಿದಂಬರಂ, ತಾವು ಮತ್ತು ತಮ್ಮ ಕುಟುಂಬದವರು ವಾಸನ್ ಐ ಕೇರ್ ನೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ. ತಮ್ಮ ವಿರುದ್ಧದ ಆರೋಪ ಹಾಸ್ಯಾಸ್ಪದ, ರಾಜಕೀಯ ದ್ವೇಷದಿಂದ ಈ ರೀತಿಯ ಆರೋಪ ಮಾಡಲಾಗುತ್ತಿದೆ ಎಂದು ಚಿದಂಬರಂ ಹೇಳಿದ್ದಾರೆ. ಆರೋಪ ಮಾಡುವುದಕ್ಕೂ ಮುನ್ನ ಜವಾಬ್ದಾರಿಯುತವಾಗಿ ಹಾಗೂ ಪ್ರಾಮಾಣಿಕವಾಗಿರುವಂತೆ ಚಿದಂಬರಂ ಮಾಧ್ಯಮಗಳಿಗೆ ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com