ರಾಮನಗರ : ಚಿಕ್ಕಮಗಳೂರು ಮೃತ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಕುರಿತು ಮಾಗಡಿ ಕ್ಷೇತ್ರದ ಜೆಡಿಎಸ್ ಅಮಾನತುಗೊಂಡಿರುವ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಕೀಳು ಮಟ್ಟದ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ.
ಮಾಗಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುವ ವೇಳೆ ಹಂಡಿಭಾಗ್ ಅವರ ವಿಚಾರ ಪ್ರಸ್ತಾವಿಸಿದ ಬಾಲಕೃಷ್ಣ ನೋಡಿ ಆಶ್ರಯ ಮನೆಯಲ್ಲಿ ಅವನ ತಂದೆ ತಾಯಿ ವಾಸ ಮಾಡ್ತಿದಾರೆ. ಅಲ್ಲ ಅಷ್ಟು ಓದಿರೋ ಆ ಬಡ್ಡಿ ಮಗನಿಗೆ ಅದನ್ನ ಜೀರ್ಣಿಸಿಕೊಳ್ಳುವ ಶಕ್ತಿ ಇಲ್ಲ ಅಂತಂದ್ರೇ ..ಅವ್ನು ಗಾಂಡು ಎಂದು ಟೀಕಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಬಗ್ಗೆ ಶಾಸಕರು ನೀಡಿರುವ ಹೇಳಿಕೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನು ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ನೀಡಿರುವ ಬಾಲಕೃಷ್ಣ, ನಾನು ತಪ್ಪು ಮಾತನಾಡಿಲ್ಲ, ಹಳ್ಳಿಗಳಲ್ಲಿ ಆಡು ಭಾಷೆಯಾಗಿ ಈ ರೀತಿ ಪದಗಳನ್ನು ಬಳಸುತ್ತಾರೆ. ಕೈಯ್ಯಲ್ಲಿ ಆಗದವರನ್ನು ಹೀಗೆ ಕರೆಯತ್ತಾರೆ. ನಾನು ಹಾಗೆಯೇ ಬಳಸಿದೆ ಅಷ್ಟೇ , ನನ್ನ ಪದ ಬಳಕೆಯಲ್ಲಿ ತಪ್ಪಿಲ್ಲ ಎಂದು ಸಮರ್ಥನೆ ನೀಡಿದ್ದಾರೆ.
Advertisement