ಮೇಲ್ಮನೆ ಸದಸ್ಯರಿಗೆ ಸಿಎಂ ಪಾಠ: ಚಕ್ಕರ್ ಹೊಡೆದ ಸದಸ್ಯರು

ವಿಧಾನಮಂಡಲದ ಕಲಾಪಗಳಿಗೆ ಶಾಸಕರು ಚಕ್ಕರ್ ಹೊಡೆಯುವುದು ಸಾಮಾನ್ಯ. ಆದರೆ, ತರಬೇತಿ ಕಾರ್ಯಕ್ರಮಕ್ಕೂ ಗೈರುಹಾಜರಾಗುವ ಮೂಲಕ ಸಂಸದೀಯ..
ನೂತನ ಶಾಸಕರುಗಳ ಜೊತೆ ಸಿಎಂ ಸಿದ್ದರಾಮಯ್ಯ
ನೂತನ ಶಾಸಕರುಗಳ ಜೊತೆ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ವಿಧಾನಮಂಡಲದ ಕಲಾಪಗಳಿಗೆ ಶಾಸಕರು ಚಕ್ಕರ್ ಹೊಡೆಯುವುದು ಸಾಮಾನ್ಯ. ಆದರೆ, ತರಬೇತಿ ಕಾರ್ಯಕ್ರಮಕ್ಕೂ ಗೈರುಹಾಜರಾಗುವ ಮೂಲಕ ಸಂಸದೀಯ ಕಲಾಪದ ಬಗೆಗಿನ ತಮ್ಮ ಆಸಕ್ತಿ ಅನಾವರಣ ಮಾಡಿದ್ದಾರೆ.

ವಿಧಾನಸಭೆ ಹಾಗೂ ವಿಧಾನಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ವಿಧಾನಸೌಧದಲ್ಲಿ ಗುರುವಾರ ಆಯೋಜಿಸಲಾಗಿದ್ದ ತರಬೇತಿ ಶಿಬಿರಕ್ಕೆ 11 ಶಾಸಕರು ಮಾತ್ರ ಹಾಜರಾಗಿದ್ದರು. 66 ಶಾಸಕರಿಗೆ ಆಹ್ವಾನ ನೀಡಲಾಗಿತ್ತು. ಸಿಎಂ ಕಾರ್ಯಕ್ರಮಕ್ಕೆ ಹಾಜರಾದಾಗ ಸಭಾಂಗಣದಲ್ಲಿ 6 ಎಂಎಲ್​ಸಿಗಳಿದ್ದರು. ಸಿಎಂ ಭಾಷಣ ಮುಗಿಯುವ ವೇಳೆಗೆ 11 ಮಂದಿಯಾದರು.

ಶಾಸಕರು ಶಿಬಿರಕ್ಕೆ ಬರದಿರುವ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ಸಿದ್ಧತೆ ಮಾಡಿಕೊಳ್ಳಿ: ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುವಂತೆ ಶಾಸಕರು ಸದನಕ್ಕೆ ಬರುವಾಗ ಪೂರ್ಣ ಮಾಹಿತಿಯೊಂದಿಗೆ ಬರಬೇಕು. ‘ಹೊದ ಪುಟ್ಟ, ಬಂದ ಪುಟ್ಟ’ ಎಂಬ ರೀತಿಯಲ್ಲಿ ಸದನಕ್ಕೆ ಬಂದರೆ ಪ್ರಯೋಜನವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷ ಶಿವಶಂಕರರೆಡ್ಡಿ ಮತ್ತಿತರರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com