ಕಪಿಲಾ ನದಿ ನೀರನ್ನು ಗುಂಡ್ಲುಪೇಟೆಗೆ ತಂದಿದ್ದು, ಮೂಲಸೌಕರ್ಯ ಅಭಿವೃದ್ಧಿ ಮಾಡಿದ್ದು, ಪ್ರವಾಸೋದ್ಯಮ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ಪ್ರಾರಂಭವಾಗುವಂತೆ ಮಾಡಿದ್ದು ಸೇರಿದಂತೆ ಗುಂಡ್ಲು ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮಹದೇವ ಪ್ರಸಾದ್ ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ನೆನಪಿಸಿರುವ ಕಾಂಗ್ರೆಸ್ ಪಕ್ಷ ಹಾಗೂ ಗೀತಾ ಮಹದೇವಪ್ರಸಾದ್, ಕ್ಷೇತ್ರದ ಅಭಿವೃದ್ಧಿ ಹೀಗೆಯೇ ಮುಂದುವರೆಯಲು ಜನತೆಯ ಬೆಂಬಲ ಕೋರಿದ್ದಾರೆ.