ಸಿದ್ದರಾಮಯ್ಯ, ಯತೀಂದ್ರ ಮತ್ತು ಎಸ್ .ಕೆ ಸೋಮಶೇಖರ್ ಕುರುಬ ಜಾತಿಗೆ ಸೇರಿದ್ದು, ಕಾಂಗ್ರೆಸ್ ನಿಂದ ಸ್ಪರ್ಧಿಸಲಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ನಾಲ್ಕನೇ ಟಿಕೆಟ್ ಅನ್ನು ಕುರುಬರಿಗೆ ನೀಡುವುದು ಸುಲಭ ಸಾಧ್ಯವಿಲ್ಲ, ಮೈಸೂರು ಜಿಲ್ಲೆಯ 10 ವಿಧಾನಸಭೆ ಕ್ಷೇತ್ರಗಳಲ್ಲಿ 3 ಮೀಸಲಾತಿ ಕ್ಷೇತ್ರಗಳು. ಹೀಗಾಗಿ ಉಳಿದ ಕ್ಷೇತ್ರಗಳಲ್ಲಿ ಬೇರೆ ಜಾತಿ, ಸಮುದಾಯಗಳ ನಾಯಕರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಹೊಣೆಯಾಗಿದೆ.ಹೀಗಾಗಿ ನಾಲ್ಕನೇ ಟಿಕೆಟ್ ಕೂಡ ಕುರುಬ ಜಾತಿಗೆ ಸೇರಿದವರಿಗೆ ಕೊಡಬೇಕೆಂದು ಚೌಕಾಶಿ ಮಾಡುವಂತಿಲ್ಲ, ಕೆ.ಆರ್ ನಗರ ಕ್ಷೇತ್ರದಿಂದ ಮೂರನೇ ಬಾರಿ ಶಾಸಕರಾಗಲು ಜೆ.ಡಿಎಸ್ ನ ಸಾ.ರಾ ಮಹೇಶ್ ತಂತ್ರ ರೂಪಿಸುತ್ತಿದ್ದಾರೆ.