ಚಿಟ್ ಫಂಡ್ ವ್ಯವಹಾರ ಆರಂಭಿಸಿದ ರೆಡ್ಡಿ ಸಹೋದರರು, ನಂತರ ಗಣಿಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1999 ರಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸೋನಿಯಾಗಾಂಧಿ ಮತ್ತು ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ದಿಸಿದ್ದ ವೇಳೆ ಬೆಳಕಿಗೆ ಬಂದವರು ರೆಡ್ಡಿ ಸಹೋದರರು. ಈ ಮೂವರು ಸಹೋದರರು ತಮ್ಮ ಹಣ ಬಲ ತೋಳ್ಬಲ ಪ್ರದರ್ಶಿಸಿದರೂ ಸುಷ್ಮಾ ಅವರನ್ನು ಗೆಲ್ಲಿಸಲಾಗಲಿಲ್ಲ, ಆದರೆ ಪಕ್ಷದ ವರಿಷ್ಠರು ತಮ್ಮ ಬಗ್ಗೆ ಗಮನ ಹರಿಸುವಂತೆ ಮಾಡುವಲ್ಲಿ ಯಶಸ್ವಿಯಾದರು.