ನಿರಂತರ ಸಭೆ ಹಾಗೂ ಕಾರ್ಯಕರ್ತರ ಜೊತೆ ರಾಜ್ಯ ಪ್ರವಾಸ ಮಾಡುವಂತೆ ಜೊತೆಗೆ ರಾಜ್ಯ ನಾಯಕರಲ್ಲಿ ಉಂಟಾಗುವ ಭಿನ್ನಮತಗಳನ್ನು ಬಗೆಹರಿಸುವಂತೆ ಮುರುಳೀಧರ ರಾವ್ ಗೆ ಅಮಿತ್ ಶಾ ಸೂಚಿಸಿದ್ದಾರೆ, ಆಗಸ್ಟ್ 3 ರಂದು ಅಮಿತ್ ಶಾ ಮೂರು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಅಷ್ಟರೊಳಗೆ ಅಮಿತ್ ಶಾ ಗೂ ಉಳಿದು ಕೊಳ್ಳಲು ಸೂಕ್ತ ನಿವಾಸ ಗುರುತಿಸುವಂತೆ ಸೂಚನೆ ನೀಡಲಾಗಿದೆ.