ಸಚಿವ ಸಂತೋಷ್ ಲಾಡ್ ಜೊತೆ ಸಭೆಗೆ ಬಂದ ಬಳ್ಳಾರಿ ಜಿಲ್ಲಾ ಘಟಕದ ನಾಯಕರು, ಶಾಸಕ ಅನಿಲ್ ಲಾಡ್ ಮತ್ತು ಸಂತೋಷ್ ಲಾಡ್ ಸಹೋದರರ ತಿಕ್ಕಾಟದಿಂದ ಸಂಘಟನೆಗೆ ತೊಂದರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಸಹೋದರರ ನಡುವಿನ ಭಿನ್ನಮತ ಬಗೆಹರಿಯದಿದ್ದರೆ 2018ರ ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವುದು ಅಸಾಧ್ಯ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.