ಖಾಲಿ ಕುರ್ಚಿ ನೋಡಿ ಶಾ ಗರಂ: ಸಿದ್ದು ಸರ್ಕಾರದ ವಿರುದ್ಧ ಬಿಜೆಪಿ ಸಿಡಿಮಿಡಿ

ಆಯೋಜಕರು ಸುಮಾರು 1ಲಕ್ಷ ಕುರ್ಚಿ ಹಾಕಿದ್ದರು. ಕುರ್ಚಿ ಖಾಲಿಯಿರುವುದನ್ನು ಕಂಡ ಅಮಿತ್ ಶಾ ವೇದಿಕೆ ಮೇಲೆಯೇ ರಾಜ್ಯ ಬಿಜೆಪಿ ನಾಯಕರನ್ನು ...
ಅಮಿತ್ ಶಾ
ಅಮಿತ್ ಶಾ
Updated on
ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಪರಿವರ್ತನಾ ರ್ಯಾಲಿಯಲ್ಲಿ ಸುಮಾರು 2 ಲಕ್ಷ ಮಂದಿ ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಪರಿವರ್ತನಾ ರ್ಯಾಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ  ಸಾವಿರಾರು ಖಾಲಿ ಕುರ್ಚಿಗಳನ್ನು  ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕಾರ್ಯಕ್ರಮ ಆಯೋಜಕರು ಸುಮಾರು 1ಲಕ್ಷ ಕುರ್ಚಿ ಹಾಕಿದ್ದರು. ಕುರ್ಚಿ ಖಾಲಿಯಿರುವುದನ್ನು ಕಂಡ ಅಮಿತ್ ಶಾ ವೇದಿಕೆ ಮೇಲೆಯೇ ರಾಜ್ಯ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 
ಶಾಸಕರು, ಎಂ ಎಲ್ ಸಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ದೂರದಲ್ಲಿ ನಿಂತಿದ್ದ ಜನರನ್ನು ವೇದಿಕೆ ಮುಂಭಾಗಕ್ಕೆ ಕರೆತರಲು ಪ್ರಯ್ನಿಸಿದ್ದರು. ಹಲವು ಮಂದಿ ಬಿಸಿಲ ಝಳ ತಾಳದೇ ಮರದಡಿ ಆಶ್ರಯ ಪಡೆದಿದ್ದರು, ಮತ್ತಷ್ಟು ಮಂದಿ ಬೈಕ್ ಪಾರ್ಕಿಂಗ್ ಸ್ಥಳ ಹಾಗೂ ಊಟದ ಕೌಂಟರ್ ಬಳಿ ನಿಂತಿದ್ದರು. ಹೀಗಾಗಿ ಕುರ್ಚಿಗಳು ಬಣಗುಡುತ್ತಿದ್ದವು
ಈ ಸಂಬಂಧ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರ ಪೊಲೀಸರನ್ನು ಮುಂದೆ ಬಿಟ್ಟು ಪರಿವರ್ತನಾ ಯಾತ್ರೆಗೆ ಬರುತ್ತಿದ್ದ ಜನರನ್ನು ತಡೆದು ವಾಪಸ್ ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಚಾಮರಾಜನಗರ ಮತ್ತು ಮೈಸೂರು ಜಿಲ್ಲಾಡಳಿತ ಬಿಜೆಪಿ ಕಾರ್ಯಕರ್ತರು ಪರಿವರ್ತನಾ ಯಾತ್ರೆಗೆ ಬರುವುದನ್ನು ತಡೆಗಟ್ಟಿದೆ ಎಂದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com