ಈ ವೇಳೆ ಮಾತನಾಡಿದ ಸ್ಪೀಕರ್ ಕೋಳಿವಾಡ ಅವರು, ವಿಷಯ ಪ್ರಸ್ತಾವಕ್ಕೆ ಸಚಿವರಿಗೆ ಅವಕಾಶ ನೀಡಿದ್ದೇನೆ. ನಿಮಗೂ ನಿಮ್ಮ ಅನಿಸಿಕೆ ಹೇಳಲು ಸಮಯ ಕೊಡುತ್ತೇನೆ. ಮೊದಲು ಸಚಿವರ ಮಾತು ಕೇಳಿ ಎಂದರು. ಬಳಿಕ ತಮ್ಮ ಮಾತನ್ನು ಮುಂದುವರೆಸಿದ ಜಾರ್ಜ್ ಅವರು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು. ಬಳಿತ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಲು ಆರಂಭಿಸಿದರು. ಬಳಿಕ ವಿಷಯಗಳ ಚರ್ಚೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಹಕ್ಕುಚ್ಯುತಿ ಮಂಡನೆ ಕುರಿತ ದಿನಾಂಕವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.