ಉ: ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಬಿಜೆಪಿಯೇ ಕಾರಣ, ಅವರು ಅಧಿಕಾರದಲ್ಲಿದ್ದಾಗ, ಅವರು ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ, ಈಗ ನಮ್ಮ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ, 2008 ರಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ, ಬೆಂಗಳೂರನ್ನು ಲೂಟಿ ಮಾಡಿದ್ದಾರೆ, ವಿವಿಧ ಏಜೆನ್ಸಿಗಳಿಂದ 8 ,ಸಾವಿರ ಕೋಟಿ ರು ಸಾಲ ಪಡೆದಿದ್ದಾರೆ, ಆ ಹಣ ಎಲ್ಲಿ ಹೋಯಿತು. ಗುತ್ತಿಗೆದಾರರ 2,500 ಕೋಟಿ ರು. ಬಿಲ್ ಕೂಡ ಪಾವತಿಸಿಲ್ಲ, ಬಿಬಿಎಂಪಿ ಇನ್ನೂ ಆ ಬಿಲ್ ಕ್ಲಿಯರ್ ಮಾಡುತ್ತಿದೆ, ಈ ಕಾರಣಕ್ಕಾಗಿಯೇ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ.