ಸಚಿವ ಸಂಪುಟ ವಿಸ್ತರಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಮತ್ತು ಸಿಎಂ ನಡುವೆ ಭಿನ್ನಮತ ಕಾಣಿಸಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಇಂದು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು, ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರಕ್ಕೆ ಗೈರುಹಾಜರಾಗಿದ್ದನ್ನೇ ದೊಡ್ಡದು ಮಾಡಲಾಗಿದೆ. ಜ್ವರ ಇದುದ್ದರಿಂದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಲಿಲ್ಲ ಅಷ್ಟೆ. ತಮ್ಮ ಹಾಗೂ ಮುಖ್ಯಮಂತ್ರಿ ನಡುವೆ `ಕೋಲ್ಡ್ ವಾರ್ ಆಗಲಿ, ಹಾಟ್ ವಾರ್ ಆಗಲಿ’ ಇಲ್ಲ ಎಂದು ಹೇಳಿದ್ದಾರೆ.