11 ಮಂದಿ ವಲಸಿಗರಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಿದೆ. ಅಪ್ಜಲಪುರ- ಮಾಲೀಕಯಯ್ಯ ಗುತ್ತೇದಾರ್, ಮುದ್ದೆಬಿಹಾಳ- ಎಎಸ್ ಪಾಟೀಲ್ ನಡಹಳ್ಳಿ, ಬಸವಕಲ್ಯಾಣ-ಮಲ್ಲಿಕಾರ್ಜುನ ಖೂಬಾ, ಲಿಂಗಸಗೂರು-ಮಾನಪ್ಪ ವಜ್ಜಲ್, ರಾಯಚೂರು- ಶಿವರಾಜ ಪಾಟೀಲ್, ವಿಜಯನಗರ- ಗವಿಯಪ್ಪ, ಹೊಸದುರ್ಗ- ಗೂಳಿಹಟ್ಟಿ ಶೇಖರ್, ಚನ್ನಪಟ್ಟಣ- ಸಿ.ಪಿ ಯೋಗೇಶ್ವರ್, ಶ್ರೀರಂಗಪಟ್ಟಣ- ನಂಜುಂಡೇಗೌಡ, ವಿಜಯಪುರ ನಗರ- ಬಸನಗೌಡ ಪಾಟೀಲ್ ಯತ್ನಾಳ್, ಕುಂದಾಪುರ-ಹಾಲಾಡಿ ಶ್ರೀನಿವಾಸ ಶೆಟ್ಟಿ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಟಿಕೆಟ್ ಸಿಗದಿರುವುದರಿಂದ ಹಲವರು ಬಂಡಾಯ ಏಳುವ ಸಾಧ್ಯತೆಗಳಿವೆ.