ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಕಾವೇರಿ ವಿವಾದ, ಬ್ಯಾಂಕ್ ಹಗರಣ, ಅವಿಶ್ವಾಸ ನಿರ್ಣಯ ಮಂಡನೆ ಕುರಿತ ಎಲ್ಲಾ ವಿಷಯಗಳನ್ನೂ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದರು. ಆದರೆ, ಚರ್ಚೆಗೆ ಕಾಂಗ್ರೆಸ್ ಸಿದ್ಧವಿರಲಿಲ್ಲ. ರಾಜ್ಯಸಭೆ ಹಾಗೂ ಲೋಕಸಭೆಯ ಸಭಾಪತಿಗಳು ಪದೇ ಪದೇ ಮನವಿ ಮಾಡಿಕೊಂಡಲೂ ಅದಾವುದಕ್ಕೂ ಅವರು ಕಿವಿಕೊಡಲಿಲ್ಲ. ಪ್ರತೀ ಬಾರಿ ಸಂಸದರು ಸದನದ ಬಾವಿಗಿಳಿದು ಪ್ರತಿಭಟಿಸುತ್ತಿದ್ದರು. ಜನರ ಕಲ್ಯಾಣದ ಬಗ್ಗೆ ಕಾಂಗ್ರೆಸ್'ಗೆ ಹಿತಾಸಕ್ತಿಗಳಿಲ್ಲ. ಗದ್ದಲ, ರಾಜಕೀಯವೇ ಅವರಿಗೆ ಮುಖ್ಯ.