2013ರ ಚುನಾವಣೆಯಲ್ಲಿ ಅಂದಿನ ಮೇಯರ್ ವೆಂಕಟೇಶ್ ಮೂರ್ತಿ ಮತ್ತು ಮಾಜಿ ಮೇಯರ್ ಗಳಾದ ಚಂದ್ರಶೇಖರ್ ಅವರುಗಳು ಚುನಾವಣೆಗೆ ಸ್ಪರ್ಧಿಸಿದ್ದರು. ಉಳಿದಂತೆ ಮಾಜಿ ಮೇಯರ್ ಗಳಾದ ಶಾಂತಕುಮಾರಿ, ಬಿ.ಎಸ್. ಸತ್ಯನಾರಾಯಣ, ಎಸ್.ಕೆ. ನಟರಾಜ ಸಹ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದರೂ ಟಿಕೆಟ್ ಪಡೆಯಲು ವಿಫಲರಾದರು.