ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್ ಕೌನ್ಸಿಲರ್ ನಿಂದ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ!

ರಾಜರಾಜೇಶ್ವರಿ ನಗರದ ಹೆಚ್ ಎಂಟಿ ವಾರ್ಡ್ ನ ಕಾಂಗ್ರೆಸ್ ಕೌನ್ಸಿಲರ್ ಆಶಾ ಸುರೇಶ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜರಾಜೇಶ್ವರಿ ನಗರದ ಹೆಚ್ ಎಂಟಿ ವಾರ್ಡ್ ನ ಕಾಂಗ್ರೆಸ್ ಕೌನ್ಸಿಲರ್ ಆಶಾ ಸುರೇಶ್ ಜೆಡಿಎಸ್ ಅಭ್ಯರ್ಥಿ ಜಿಎಚ್ ರಾಮಚಂದ್ರ ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ನ ಈಗಿನ ಶಾಸಕ ಮುನಿರತ್ನ ನಾಯ್ಡು ವಿರುದ್ಧ ಆಶಾ ಸುರೇಶ್ ಧ್ವನಿಯೆತ್ತಿದ್ದು ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಶಾಸಕ ಮುನಿರತ್ನ ಮತ್ತು ಅವರ ಬೆಂಬಲಿಗರು ತಮಗೆ ಕಿರುಕುಳ ನೀಡುತ್ತಿದ್ದು ಕೌನ್ಸಿಲರ್ ಆಗಿ ತಮ್ಮ ಕರ್ತವ್ಯ ನಿಭಾಯಿಸಲು ಬಿಡುತ್ತಿಲ್ಲ. ಬಿಬಿಎಂಪಿಯ ಹಲವು ಮಂಡಳಿ ಸಭೆಗಳಲ್ಲಿ ಇದು ಸಾಬೀತಾಗಿದೆ ಎಂದು ಆಶಾ ಸುರೇಶ್ ಆರೋಪಿಸಿದ್ದಾರೆ. ಮುನಿರತ್ನ ಅವರ ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ಆಶಾ ಅವರು 2016ರಲ್ಲಿ ರಾಜಿನಾಮೆ ನೀಡಲು ಸಹ ಮುಂದಾಗಿದ್ದರು.

ರಾಮಚಂದ್ರ ಅವರ ಪರ ಪ್ರಚಾರ ಮಾಡಿದ ಆಶಾ ನಾನು ಕಾಂಗ್ರೆಸ್ ಗೆ ವಿರುದ್ಧವಾಗಿಲ್ಲ. ಆದರೆ ಮುನಿರತ್ನ ನಾಯ್ಡು ಅವರನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com