ಅಂಬಾನಿಗೆ ಲಾಭ ಮಾಡುವ ಸಲುವಾಗಿ ಹೆಚ್ಎಎಲ್ ನಿಂದ 10,000 ಉದ್ಯೋಗಗಳನ್ನು ಕೇಂದ್ರ ಕಸಿದುಕೊಂಡಿದೆ. ಅನಿಲ್ ಅಂಬಾನಿ ದಲ್ಲಾಳಿ ಇದ್ದಂತೆ. ನೋಟು ನಿಷೇಧ ಸರ್ಕಾರದ ಮಾಡಿದ ದೊಡ್ಡ ಪ್ರಮಾದ. ರಫೇಲ್ ಒಪ್ಪಂದ ಅತೀ ದೊಡ್ಡ ಲೂಟಿಯಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾನ್ ಕುರಿತಂತೆ ಮಾತನಾಡಿದ ಅವರು, ವಿಮಾನಗಳನ್ನು ಖರೀದಿ ಮಾಡಿದ್ದರ ಕುರಿತಂತೆ ಅವುಗಳ ಬೆಲೆಗಳನ್ನು ಬಹಿರಂಗಪಡಿಸಲು ಸಚಿವೆ ಸಿದ್ಧರಾಗಿದ್ದಾರೆ. ಅದರೆ, ಪ್ರಧಾನಮಂತ್ರಿ ಮೋದಿ ಬಿಡುತ್ತಿಲ್ಲ. ಮೋದಿಯವರು ಸರ್ಕಾರ ಹಾಗೂ ಸಂವಿಧಾನಕ್ಕಿಂತಲೂ ತಾವೇ ದೊಡ್ಡವರೆಂದು ನಂಬಿದ್ದಾರೆ. ರಾಹುಲ್ ಗಾಂಧಿಯವರು ಯಾವುದೇ ಪ್ರಶ್ನೆ ಎತ್ತಿದರೂ ಅದಕ್ಕೆ ಉತ್ತರ ನೀಡುವುದಿಲ್ಲ ಎಂದಿದ್ದಾರೆ.