ಮತ್ತೆ ಇದೀಗ ಚುನಾವಣೆ ವ್ಯಾಪಾರ ಆದಾಗ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ ಉಪ್ಪಿ ಹಾಗಾದಾರ ಶಿಕ್ಷಣ ವ್ಯವಸ್ಥೆ ವ್ಯಾಪಾರವಾಗುತ್ತದೆ, ಆರೋಗ್ಯ ವ್ಯವಸ್ಥೆ ವ್ಯಾಪಾರವಾಗುತ್ತದೆ, ಆಡಳಿತ ವ್ಯವಸ್ಥೆ ವ್ಯಾಪಾರವಾಗುತ್ತದೆ ಎನ್ನುತ್ತಾರೆ.
ಜತೆಗೆ ಈ ವ್ಯಾಪಾರ ರಾಜಕಾರಣ ಬೇಡ. ವಿಚಾರಗಳ ಪ್ರಜಾಕಾರಣ ಬೇಕು ಎಂದಿದ್ದಾರೆ.
ಎಲ್ಲರಿಗೂ ಸಿಹಿ ಸುದ್ದಿ ! ನಮ್ಮ “ ಉತ್ತಮ ಪ್ರಜಾಕೀಯ ಪಕ್ಷ “ ಭಾರತದ ಚುನಾವಣಾ ಆಯೋಗದಲ್ಲಿ ನೋಂದಣಿ ಯಾಗಿದೆ ನಾವೆಲ್ಲರೂ ಸೇರಿ ಈಗಿಂದಲೇ ಈ ರಾಜಕೀಯ ವ್ಯವಸ್ಥೆಯನ್ನು ಕಿತ್ತೊಗೆದು “ ಪ್ರಜಾಕೀಯ “ ಸ್ಥಾಪಿಸಲು ಮುಂದಾಗೋಣ. ನಿಮ್ಮ ಉಪ್ಪಿ. pic.twitter.com/b7Uktek0QJ
ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಹಿಂದೆ ತಾವೇ ಸ್ಥಾಪಿಸಿದ್ದ ಪ್ರಜಾಕೀಯ ಪಕ್ಷದಿಂದ ಹೊರಬಂದಿದ್ದರು. ಮತ್ತೆ ’ಉತ್ತಮ ಪ್ರಜಾಕೀಯ’ ಹೆಸರಿನ ಪಕ್ಷಕ್ಕೆ ಮಾನ್ಯತೆ ದೊರಕಿಸಿಕೊಳ್ಳಲು ದೆಹಲಿಗೆ ತೆರಳಿದ್ದ ಅವರು ಚುನಾವಣಾ ಆಯೋಗದಲ್ಲಿ ತಮ್ಮ ನೂತನ ಪಕ್ಷದ ನೊಂದಾವಣೆ ಮಾಡಿಸಿದ್ದಾರೆ.