ಶಿವಮೊಗ್ಗ: ಬಿಜೆಪಿ ಅಧಿಕಾರಕ್ಕೆ ಬರಬಾರದು, ಬಿ. ಎಸ್ ಯಡಿಯೂರಪ್ಪಮುಖ್ಯಮಂತ್ರಿಯಾಗಬಾರದೆಂದು ಶಿಕಾರಿಪುರದ ನನ್ನ ಮನೆ ದೇವರಾದ ಹುಚ್ಚುರಾಯಸ್ವಾಮಿಗೆ ಹರಕೆ ಹೊತ್ತಿದ್ದೆ. ಈ ಬಾರಿ ಯಡಿಯೂರಪ್ಪನವರಿಗೆ ಅಧಿಕಾರ ಸಿಗದೆ ಹೋಗಿದ್ದು ನನ್ನ ಹರಕೆ ಫಲಿಸಿದೆ. ನಾನು ದೇವರ ಹರಕೆ ತೀರಿಸಿದ್ದೇನೆ ಎಂದು ಸಾಗರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.