ಅಯ್ಯಪ್ಪ ಸ್ವಾಮಿಯ ಕುರಿತ ಕಲ್ಲು ಮುಳ್ಳು ಶಬರಿಮಲೆಕ್ಕ್ ಎನ್ನುವ ಪ್ರಸಿದ್ಧ ಗೀತೆಯನ್ನು ಅನುಸರಿಸಿ ಮೊಯ್ದೀನ್ ಬಾವಾ ಹೆಸರಿನಲ್ಲಿ ಹಾಡೊಂದನ್ನು ರಚಿಸಲಾಗಿದೆ. ಈ ಹಾಡು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಇದರಲ್ಲಿ ಶಾಸಕರನ್ನು ಹೊಗಳಲಾಗಿದೆ. ಬಹು ಬೇಗ ಪ್ರಚಾರವಾಗಲಿ ಎನ್ನುವ ಉದ್ದೇಶದೊಡನೆ ಅಯ್ಯಪ್ಪ ಸ್ವಾಮಿ ಭಕ್ತಿಗೀತೆ ಶೈಲಿಯಲ್ಲಿ ಇದನ್ನು ಹಾಡಲಾಗಿದೆ. ಶಾಸಕರ ಕುರಿತ ಈ ಗೀತೆಗೆ ಹಿಂದೂಪರ ಸಂಘಟನೆಗಳಿಂದ ಬಾರೀ ಆಕ್ರೋಶ ವ್ಯಕ್ತವಾಗಿತ್ತು.